ಹೈದರಾಬಾದ್: ವಿದೇಶಿ ರಾಯಭಾರಿಗಳು ಹೈದರಾಬಾದ್ನಲ್ಲಿರುವ ಭಾರತ್ ಬಯೋಟೆಕ್ ಸೌಲಭ್ಯಕ್ಕೆ ಇಂದು ಭೇಟಿ ನೀಡಿದ್ದಾರೆ. ಈ ಸೌಲಭ್ಯದಲ್ಲಿ ಕೋವಿಡ್-19 ಲಸಿಕೆ ʼಕೋವಾಕ್ಸಿನ್ʼ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಸೌಲಭ್ಯಕ್ಕೆ ಭೇಟಿ ನೀಡಿದ ಗಣ್ಯರು ಪ್ರಧಾನಿ ಮೋದಿ ಮತ್ತು ಅವರ ಕೋವಿಡ್-19 ನಿರ್ವಹಣಾ ಶೈಲಿಯನ್ನು ಶ್ಲಾಘಿಸಿದ್ದಾರೆ.
“ಪ್ರಪಂಚದಾದ್ಯಂತ ಅನೇಕ ಲಸಿಕೆಗಳನ್ನು ಉತ್ಪಾದಿಸಲಾಗುತ್ತಿದೆ ಆದರೆ ಪ್ರತಿ ದೇಶದ ನಾಗರಿಕರ ಬೇಡಿಕೆಗಳನ್ನು ಪೂರೈಸಲು ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸುವ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ಒಂದೇ ಒಂದು ದೇಶವಿದ್ದರೆ ಅದು ಭಾರತ ಮಾತ್ರ” ಎಂದು ಭಾರತದಲ್ಲಿನ ಆಸ್ಟ್ರೇಲಿಯಾದ ರಾಯಭಾರಿ ಬ್ಯಾರಿ ಒ’ಫಾರೆಲ್ ಭಾರತ್ ಬಯೋಟೆಕ್ ಭೇಟಿ ನಂತರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಭಾರತ ಲಸಿಕೆ ಅಭಿವೃದ್ಧಿಯಲ್ಲಿ ಎಷ್ಟು ದೂರ ಬಂದಿದೆ, ಕೋವಿಡ್ ಅನ್ನು ಎದುರಿಸಲು ಎಷ್ಟು ಸಮರ್ಪಿತವಾಗಿದೆ, ಮಾನವೀಯತೆಗೆ ಸಹಾಯ ಮಾಡುವಲ್ಲಿ ಎಷ್ಟು ಗಮನಹರಿಸಿದೆ ಎಂದು ನೋಡಿ ನಿಜವಾಗಿಯೂ ಪ್ರಭಾವಿತನಾದೆ. ಇದು ಕೇವಲ ವಾಣಿಜ್ಯ ಉದ್ದೇಶ ಅಥವಾ ರಾಷ್ಟ್ರದ ಮೊದಲು ಎಂಬ ಆಸಕ್ತಿಯಲ್ಲ, ಭಾರತ ನಿಜಕ್ಕೂ ಜಗತ್ತಿನೊಂದಿಗೆ ಸಂಪರ್ಕ ಸಾಧಿಸುತ್ತಿದೆ ಮತ್ತು ನಮ್ಮೆಲ್ಲರಿಗೂ ಸಹಾಯ ಮಾಡುತ್ತಿದೆ” ಭಾರತದಲ್ಲಿನ ಡೆನ್ಮಾರ್ಕ್ ರಾಯಭಾರಿ ಎಫ್ ಸ್ವಾನೆ ಹೇಳಿದ್ದಾರೆ.
“ಭಾರತ ಮಾತ್ರವಲ್ಲ, ವಿಶ್ವಕ್ಕೆ ಲಸಿಕೆ ತಲುಪಿಸುವಲ್ಲಿ ಭಾರತೀಯ ಕಂಪನಿಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ಉತ್ಸುಕರಾಗಿರುವ ಪ್ರಧಾನಮಂತ್ರಿಯವರ ದೃಷ್ಟಿಗೆ ಇದು ಸಾಕ್ಷಿಯಾಗಿದೆ” ಎಂದು ಬಯೋಲಾಜಿಕಲ್ ಇ ಲಿಮಿಟೆಡ್ ಎಂಡಿ ಮಹೀಮಾ ದತ್ಲಾ ಹೇಳಿದ್ದಾರೆ.
Telangana: Foreign envoys take a tour of Bharat Biotech facility in Hyderabad where #COVID19Vaccine, Covaxin is being developed. pic.twitter.com/dGtktEMV8v
— ANI (@ANI) December 9, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.