ನವದೆಹಲಿ: ಹರಿಯಾಣದ ವಿವಿಧ ರೈತ ಸಂಘಟನೆಗಳು ಡಿಸೆಂಬರ್ 7 ರಂದು ಸೋಮವಾರ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿ, ಕೃಷಿ ಕಾಯ್ದೆ ವಿಷಯದಲ್ಲಿ ಸರ್ಕಾರವನ್ನು ಬೆಂಬಲಿಸಿವೆ.
ಹರಿಯಾಣದ ರೈತ ಉತ್ಪಾದಕ ಸಂಸ್ಥೆಗಳು (ಎಫ್ಪಿಒ) ಮತ್ತು ಪ್ರಗತಿಪರ ರೈತ ಗುಂಪುಗಳಿಗೆ ಸೇರಿದ 1.20 ಲಕ್ಷಕ್ಕೂ ಹೆಚ್ಚು ರೈತರು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಮೂರು ಕೃಷಿ ಕಾನೂನುಗಳನ್ನು ಬೆಂಬಲಿಸುವ ವಾಗ್ದಾನ ನೀಡಿದ್ದಾರೆ.
116 ಹರಿಯಾಣ ಎಫ್ಪಿಒಗಳು ಮತ್ತು ಪ್ರಗತಿಪರ ಕೃಷಿ ಸಮುದಾಯಗಳ ಒಕ್ಕೂಟವಾದ ಹರ್ ಕಿಸಾನ್, ಕನಿಷ್ಠ ಬೆಂಬಲ ಬೆಲೆ ಮತ್ತು ಎಎಮ್ಪಿಸಿ ಮಂಡಿ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೇ, ಹೊಸ ಕೃಷಿ ಕಾಯ್ದೆಗಳನ್ನು ಸಹ ಉಳಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಎಫ್ಪಿಒಗಳ ಸದಸ್ಯರು ಸಹಿ ಮಾಡಿದ ಪತ್ರದಲ್ಲಿ ಹೀಗಿ ಬರೆಯಲಾಗಿದೆ, “ಈ ಮಸೂದೆಗಳನ್ನು ರೈತ ಸಂಘಟನೆಗಳು ಸೂಚಿಸಿದಂತೆ ಮುಂದುವರಿಸಬೇಕು. ರೈತರ ಸಂಘಟನೆಗಳು ಸೂಚಿಸಿದಂತೆ ನಾವು ಎಂಎಸ್ಪಿ ಮತ್ತು ಮಂಡಿ ವ್ಯವಸ್ಥೆಯ ಪರವಾಗಿದ್ದೇವೆ. ಆದರೆ ಸೂಚಿಸಲಾದ ತಿದ್ದುಪಡಿಗಳೊಂದಿಗೆ ಈ ಕಾನೂನುಗಳನ್ನು ಮುಂದುವರಿಸಲು ನಾವು ನಿಮ್ಮನ್ನು ವಿನಂತಿಸುತ್ತೇವೆ” ಎಂದಿದೆ.
ರೈತರ ಪ್ರತಿಭಟನೆ ಇಂದು ತನ್ನ 13 ನೇ ದಿನವನ್ನು ಪ್ರವೇಶಿಸಿದೆ. ಪ್ರತಿಭಟನಾ ನಿರತ ಕಿಸಾನ್ ಒಕ್ಕೂಟಗಳು ಹೊಸ ಕೃಷಿ ಕಾನೂನುಗಳ ವಿರುದ್ಧ ಇಂದು ಭಾರತ್ ಬಂದ್ ಆಚರಿಸುತ್ತಿವೆ.
ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ಪ್ರತಿನಿಧಿ ಗುಂಪಿನ ನಡುವಿನ ಮುಂದಿನ ಸಭೆ ಈಗಾಗಲೇ ಡಿಸೆಂಬರ್ 9 ರಂದು ನಿಗದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.