ದುಬೈ: ಏಡೆನ್ ಕೊಲ್ಲಿಯಲ್ಲಿ ಹಡಗು ಮುಳುಗಿದ ಕಾರಣ 10 ತಿಂಗಳ ಕಾಲ ಯೆಮನ್ನಲ್ಲಿ ಸಿಲುಕಿ ಹಾಕಿಕೊಂಡಿದ್ದ ಹದಿನಾಲ್ಕು ಭಾರತೀಯ ನಾವಿಕರು ಕೊನೆಗೂ ಭಾರತಕ್ಕೆ ಮರಳಿದ್ದಾರೆ. ದುಬೈನಿಂದ ಶನಿವಾರ ಭಾರತಕ್ಕೆ ಇವರು ಹೊರಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ 14 ನಾವಿಕರನ್ನು 2020 ರ ಫೆಬ್ರವರಿ 14 ರಂದು ಯೆಮನ್ನ ಸ್ಥಳೀಯ ಹೌತಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು ಎಂದು ಜಿಬೌಟಿಯ ಭಾರತೀಯ ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
“ಸತತ ಪ್ರಯತ್ನಗಳ ನಂತರ, ಭಾರತದ ರಾಯಭಾರ ಕಚೇರಿಯು ಇವರನ್ನು ನವೆಂಬರ್ 28 ರಂದು ತನ್ನ ಸನಾ ಕಚೇರಿಯ ಮೂಲಕ ಬಿಡುಗಡೆ ಆಗುವಂತೆ ಮಾಡುವಲ್ಲಿ ಸಫಲವಾಯಿತು” ಎಂದು ಹೇಳಿಕೆ ತಿಳಿಸಿದೆ.
ದೂತಾವಾಸದ ಪ್ರಕಾರ, ಸಿಲುಕಿ ಹಾಕಿಕೊಂಡಿದ್ದ ಭಾರತೀಯರು ತಮ್ಮ ಪಾಸ್ಪೋರ್ಟ್ ಮತ್ತು ಇತರ ದಾಖಲೆಗಳು ಮತ್ತು ವಸ್ತುಗಳನ್ನು ಕಳೆದುಕೊಂಡಿದ್ದರು. ಹೀಗಾಗಿ ಎಲ್ಲಾ ಕಡಲ ಮತ್ತು ಸಂಬಂಧಪಟ್ಟ ಇತರ ಅಧಿಕಾರಿಗಳಿಗೆ ಅವರ ಪರಿಸ್ಥಿತಿಯನ್ನು ಗಮನಿಸಿ ಅವರಿಗೆ ಬೆಂಬಲ ನೀಡುವಂತೆ ಕೋರಲಾಗಿತ್ತು.
ರಕ್ಷಿಸಲ್ಪಟ್ಟ ನಾವಿಕರನ್ನು ಮೋಹನ್ ರಾಜ್ ಥಾನಿಗಾಚಲಂ, ವಿಲಿಯಂ ನಿಕಾಮ್ಡೆನ್, ಅಹ್ಮದ್ ಅಬ್ದುಲ್ ಗಫೂರ್ ವಾಕಂಕರ್, ಫೇರುಜ್ ನಸ್ರುದ್ದೀನ್ ಝರಿ, ಸಂದೀಪ್ ಬಾಲು ಲೋಹರ್, ನಿಲೇಶ್ ಧನರಾಜ್ ಲೋಹರ್, ಹಿರೋನ್ ಎಸ್.ಕೆ., ದಾವೂದ್ ಮಹಮೂದ್ ಜಿವ್ರಾಕ್, ಚೇತನ್ ಹರಿಚಂದ್ರ, ತನ್ಮಯ್ ರಾಜೇಂದ್ರ ಮಾನೆ, ಸಂಜೀವ್ ಕುಮಾರ್, ಮನಿರಾಜ್ ಮರಿಯಪ್ಪನ್, ಪ್ರವೀಣ್ ತಮ್ಮಕರಂತವಿದಾ ಮತ್ತು ಅಬ್ದುಲ್ ವಹಾಬ್ ಮುಸ್ತಾಬಾ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.