ನವದೆಹಲಿ: ಭಾರತದಲ್ಲಿ ಯಾರಾದರೂ ತಮ್ಮ ಸಾರ್ವಜನಿಕ ದಾಖಲೆಯಲ್ಲಿನ ಹೆಸರು, ಮದುವೆ, ವಿಚ್ಚೇದನ, ಸಂಬಂಧ, ಪವರ್ ಆಫ್ ಅಟಾರ್ನಿ ಇತ್ಯಾದಿಗಳನ್ನು ಬದಲಾಯಿಸಬೇಕಾದರೆ ಅವರು ಕಾನೂನು ಪ್ರಕಾರ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಎಸ್ಡಿಎಂ (ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್) ಮುಂದೆ ಹಾಜರಾಗಬೇಕು ಮತ್ತು ಅವರು ಯಾವುದೇ ಭಯ ಅಥವಾ ಯಾವುದೇ ಅನಗತ್ಯ ಒತ್ತಡವಿಲ್ಲದೆ ಈ ಬದಲಾವಣೆಯನ್ನು ಮಾಡುತ್ತಿದ್ದಾರೆ ಎಂದು ಪ್ರಮಾಣ ಮಾಡಬೇಕು.
ಆದರೆ ನಮ್ಮ ದೇಶದಲ್ಲಿ ಧಾರ್ಮಿಕ ಮತಾಂತರಗಳಿಗೆ ಮಾತ್ರ ಈ ಪದ್ಧತಿ ಇಲ್ಲ. ಕಾನೂನಿನ ಈ ಲೋಪದೋಷದ ಲಾಭವನ್ನು ಕೆಲವರು ಪಡೆದುಕೊಳ್ಳುತ್ತಿದ್ದಾರೆ ಮತ್ತು ಭಯ, ವಂಚನೆ, ಆಮಿಷ ಮತ್ತು ಹಣವನ್ನು ಬಳಸಿಕೊಂಡು ಜನರನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಇನ್ನು ಮುಂದೆ ಯಾವುದೇ ಧಾರ್ಮಿಕ ಮತಾಂತರಗಳು ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್ ಅವರ ಮುಂದೆ ಹಾಜರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕವೇ ನಡೆಯಬೇಕು ಎಂದು ಚೇಂಜ್.ಆರ್ಗ್ ಪಿಟಿಶನ್ ಆರಂಭಿಸಿದೆ.
ಎಲ್ಲಾ ಧಾರ್ಮಿಕ ಮತಾಂತರಗಳು ಒಂದೇ ಪ್ರಕ್ರಿಯೆಯನ್ನು ಅನುಸರಿಸುವುದು ಕಡ್ಡಾಯವಾಗುವಂತೆ ಪಿಟಿಶನ್ನಲ್ಲಿ ಭಾರತ ಸರ್ಕಾರವನ್ನು ಕೇಳಲಾಗಿದೆ ಮತ್ತು ಮತಾಂತರ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮುಂದೆಯೇ ನಡೆಯಬೇಕು ಎಂದು ಒತ್ತಾಯಿಸಲಾಗಿದೆ.
ಇದರಿಂದ ಭಾರತದಲ್ಲಿ ಯಾವುದೇ ವಂಚನೆ ಆಧಾರಿತ ಅಥವಾ ಭಯ ಆಧಾರಿತ ಮತಾಂತರಗಳು ನಡೆಯುತ್ತಿಲ್ಲ ಎಂಬುದು ಖಚಿತವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.