ಬೆಳಗಾವಿ: ಕುರಿಗಾಹಿ ತರುಣರಿಗೆ ವಿಶೇಷವಾದ ಹೈ ವೋಲ್ಟೇಜ್ ಟಾರ್ಚ್ ಲೈಟ್ಗಳನ್ನು ವಿತರಿಸುವ ಮೂಲಕ ನಗರದ ಸೇವಾಕಾರ್ಟ್ ಸದಸ್ಯರು ವಿನೂತನವಾಗಿ ‘ಕನಕ ಜಯಂತಿ’ ಯನ್ನು ಆಚರಣೆ ಮಾಡಿದ್ದಾರೆ.
ಬೆಳಗಾವಿಯ ಸಮೀಪದ ಸಂತಿ ಬಸ್ತವಾಡ ಗ್ರಾಮದ ಕುರುಬ ಜನಾಂಗದ ತರುಣ ಕುರಿಗಾಹಿಗಳಿಗೆ ಟಾರ್ಚ್ಗಳನ್ನು ವಿತರಣೆ ಮಾಡುವ ಮೂಲಕ ವಿಭಿನ್ನ ಮಾದರಿಯೊಂದಕ್ಕೆ ಸೇವಾಕಾರ್ಟ್ ಸದಸ್ಯರು ಮಾದರಿಯಾಗಿದ್ದಾರೆ. ಆ ಮೂಲಕ ಕನಕದಾಸರು ಜನ್ಮ ತಳೆದಿದ್ದ ಕುರುಬ ಜನಾಂಗವನ್ನು ಈ ದಿನದಂದು ನೆನಪು ಮಾಡಿಕೊಳ್ಳುವ ಮತ್ತು ಕುರಿಗಾಹಿ ವೃತ್ತಿಯನ್ನೇ ಇಂದಿಗೂ ಅವಲಂಬಿಸಿರುವ ತರುಣರಿಗೆ, ಆ ಜನಾಂಗದ ಸಾಂಸ್ಕೃತಿಕ ಆಯಾಮವನ್ನು ಮತ್ತಷ್ಟು ಮುಂದುವರಿಸಿಕೊಂಡು ಹೋಗುವಂತೆ ಪ್ರೋತ್ಸಾಹ ನೀಡುವ ಕೆಲಸವನ್ನು ಸೇವಾಕಾರ್ಟ್ ಸದಸ್ಯರು ಮಾಡಿದ್ದಾರೆ.
ಕುರುಬರಿಗೆ ಕೆಲವೊಮ್ಮೆ ಕುರಿ ಮೇಯಿಸಿಕೊಂಡು ರಾತ್ರಿಯ ವೇಳೆಯಲ್ಲಿಯೂ ಕಾಡು, ಗುಡ್ಡ ಪ್ರದೇಶದಲ್ಲಿಯೇ ಇರಬೇಕಾಗಿ ಬರುತ್ತದೆ. ಇಂತಹ ಸಂದರ್ಭದಲ್ಲಿ ಸಹಾಯವಾಗಲಿ ಎಂಬ ಸದುದ್ದೇಶದಿಂದ ಟಾರ್ಚ್ ವಿತರಿಸುವ ಮೂಲಕ ವಿನೂತನವಾಗಿ ಕನಕ ಜಯಂತಿಯನ್ನು ಆಚರಣೆ ಮಾಡಿರುವುದಾಗಿ ಸೇವಾಕಾರ್ಟ್ ಸದಸ್ಯರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸೇವಾಕಾರ್ಟ್ ಪ್ರಮುಖರಾದ ವಿದ್ಯಾ ಕಾಗ್ವಾಡ್, ಪ್ರಿಯಾಂಕಾ ಸಾವಂತ್, ಮಲ್ಲಿಕಾರ್ಜುನ ಮಾಸ್ತ್ಮರಡಿ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.