ಹಂಪಿ: ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಜಗದ್ವಿಖ್ಯಾತ ಹಂಪಿಯಲ್ಲಿ ದೊಡ್ಡ ಮಟ್ಟದ ಉತ್ಖನನಕ್ಕೆ ಸಿದ್ಧತೆ ನಡೆಸಿದೆ.
ಹಿಂದಿನ ಹತ್ತು ವರ್ಷಗಳಲ್ಲೇ ಈ ಉತ್ಖನನ ದೊಡ್ಡ ಮಟ್ಟದ್ದಾಗಿರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ನಗರದ ಹಜಾರರಾಮ ದೇವಸ್ಥಾನದ ಬಳಿಯಿರುವ ‘ಪಾನ್ ಸುಪಾರಿ ಬಜಾರ್’, ‘ಶೃಂಗಾರದ ಹೆಬ್ಬಾಗಿಲು’ ಗಳ ಪ್ರದೇಶದಲ್ಲಿ ಈ ಉತ್ಖನನ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ರಾಜರ ಖಾಸ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವುದರಿಂದ ಇಲ್ಲಿನ ಉತ್ಖನನ ಹೆಚ್ಚು ಮಹತ್ವ ಪಡೆದಿದೆ. ರಾಜರ ಅರಮನೆಗಳು, ದೇಗುಲಗಳು, ಗುಪ್ತ ಮಾರ್ಗಗಳು, ವಿಶಿಷ್ಟ ವಿನ್ಯಾಸದ ಪುಷ್ಕರಿಣಿ, ಮಹಾನವಮಿ ದಿಬ್ಬ, ರಾಣಿಯ ಸ್ನಾನಗೃಹದ ಸ್ಮಾರಕಗಳು ಈ ಪ್ರದೇಶದಲ್ಲಿ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಉತ್ಖನನಕ್ಕೆ ಆಯ್ಕೆ ಮಾಡಿರುವ ಪ್ರದೇಶದಲ್ಲಿ ಅಂತರ್ಜಲವಿರುವ ಕೊಳವೆ ಮಾರ್ಗದ ಕುರುಹು, ಪುಷ್ಕರಿಣಿಯ ಅವಶೇಷಗಳು ಸೇರಿದಂತೆ ಹಿಂದಿನ ಕಾಲದ ಕೆತ್ತನೆಗಳು ಸಹ ಪತ್ತೆಯಾಗಿವೆ. ಈ ಕೆತ್ತನೆಗಳನ್ನು ವಸ್ತು ಸಂಗ್ರಹಾಲಯಗಳಲ್ಲಿ ಸಂಗ್ರಹಿಸಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಉತ್ಖನನ ವಿಜಯನಗರ ಸಾಮ್ರಾಜ್ಯದ ಬಗ್ಗೆ ಮತ್ತಷ್ಟು ಇತಿಹಾಸವನ್ನು ತಿಳಿದುಕೊಳ್ಳುವ ಹಿನ್ನೆಲೆಯಲ್ಲಿಯೂ ಬಹುಮುಖ್ಯವಾಗಿರಲಿದೆ. ಹೊಸ ತಲೆಮಾರಿಗೆ ಚರಿತ್ರೆಯನ್ನು ಮತ್ತಷ್ಟು ಆಳವಾಗಿ ತಿಳಿಸಿಕೊಡುವ ನಿಟ್ಟಿನಲ್ಲಿಯೂ ಈ ಉತ್ಖನನ ಪೂರಕವಾಗಿರಲಿದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.