ಬೆಂಗಳೂರು: ಜಾತಿ ರಾಜಕಾರಣ, ಒಡೆದು ಆಳುವ ನೀತಿಯನ್ನೇ ಪ್ರದರ್ಶನ ಮಾಡುವ ಕಾಂಗ್ರೆಸ್ ಇದೀಗ ಮತ್ತೊಮ್ಮೆ ಜನರೆದುರು ತಲೆ ತಗ್ಗಿಸುವಂತಾಗಿದೆ. ಕಾಂಗ್ರೆಸ್ನ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರು ಕುವೆಂಪು ಅವರ ಕವನವನ್ನು ತಿರುಚಿದ್ದು, ಈ ಸಂಬಂಧ ಟ್ವೀಟರ್ನಲ್ಲಿ ಪ್ರಶ್ನಿಸಿದ ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ಅವರನ್ನು ಟ್ವೀಟರ್ನಲ್ಲಿ ಬ್ಲಾಕ್ ಮಾಡಿ ಬಳಿಕ ಅನ್ಬ್ಲಾಕ್ ಮಾಡಿದ್ದಾರೆ.
ಜಯನಗರದ ಶಾಸಕಿ, ಕಾಂಗ್ರೆಸ್ ಪಕ್ಷದ ಸೌಮ್ಯ ರೆಡ್ಡಿ ಈ ಬಾರಿ ಕಾಂಗ್ರೆಸ್ಗೆ ಮುಖಭಂಗವಾಗುವಂತೆ ಮಾಡಿರುವುದು. ಸೌಮ್ಯ ರೆಡ್ಡಿ ಅವರ ಓಲೈಕೆ ರಾಜಕಾರಣಕ್ಕಾಗಿ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಅವರ ಕವನವನ್ನು ತಿರುಚುವ ಮೂಲಕ ಕಾಂಗ್ರೆಸ್ನ ನೈತಿಕತೆ ಎಷ್ಟು ಎಂಬುದನ್ನು ಕನ್ನಡಿಗರ ಮುಂದಿರಿಸಿದ್ದಾರೆ. ‘ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ’ ಎಂಬ ಕುವೆಂಪು ಅವರ ಹಾಡನ್ನು ‘ಕರ್ನಾಟಕ ಹೃದಯ ‘ಏಸು’ ಎಂಬುದಾಗಿ ಬ್ಯಾನರ್ನಲ್ಲಿ ಬರೆಸಿಕೊಳ್ಳುವ ಮೂಲಕ ಸೌಮ್ಯ ರೆಡ್ಡಿ ಟೀಕೆಗೆ ಗುರಿಯಾಗಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಪ್ರಚಾರಕರು, ಕರ್ನಾಟಕ ದಕ್ಷಿಣ ಪ್ರಾಂತದ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮ ಮುಖ್ಯಸ್ಥ ಪ್ರದೀಪ್ ಮೈಸೂರು ಅವರು ಟ್ವೀಟರ್ನಲ್ಲಿ ಸೌಮ್ಯ ರೆಡ್ಡಿ ಅವರನ್ನು ಪ್ರಶ್ನಿಸಿದ್ದರು. ಅವರ ಪ್ರಶ್ನೆಗೆ ಉತ್ತರಿಸಲಾಗದ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಅವರನ್ನು ಟ್ವೀಟರ್ನಲ್ಲಿ ಬ್ಲಾಕ್ ಮಾಡಿದ್ದಾರೆ. ಪ್ರದೀಪ್ ಅವರು ‘ನಮಸ್ಕಾರ ಬೆಳಗ್ಗಿನಿಂದ ಜನ ನಿಮ್ಮನ್ನು ಕೇಳುತ್ತಿರುವುದೇ ಬೇರೆಯ ಪ್ರಶ್ನೆ. ನೀವದಕ್ಕೆ ಉತ್ತರಿಸಿಲ್ಲ. ಹಸುವಿನ ಬಗ್ಗೆ ಪ್ರಬಂಧ ಬರೆಯಲು ಕೇಳಿದರೆ ನೀವು ಹಸುವನ್ನು ಕಟ್ಟಿದ ಕಂಬದ ಬಗ್ಗೆ ಬರೆದಿದ್ದೀರಿ.” ಎಂದು ಕೇಳಿದ್ದರು. ಆದರೆ ಇದಕ್ಕೆ ಸರಿಯಾದ ಉತ್ತರ ನೀಡದ ಸೌಮ್ಯ ಪ್ರಶ್ನೆಗಳಿಗೆ ಹೆದರಿ ಪ್ರದೀಪ್ ಅವರನ್ನು ಟ್ವೀಟರ್ನಲ್ಲಿ ಬ್ಲಾಕ್ ಮಾಡಿದ್ದಾರೆ.
ಇದಾದ ಬಳಿಕ ವಿಶ್ವ ಸಂವಾದ ಕೇಂದ್ರ ಈ ಘಟನೆ, ಅದರ ಬೆಳವಣಿಗೆಯನ್ನು ಬಹಿರಂಗ ಮಾಡಿದ ಬೆನ್ನಲ್ಲೇ ‘ಕೈ’ ಶಾಸಕಿ ಪ್ರದೀಪ್ ಅವರನ್ನು ಅನ್ಬ್ಲಾಕ್ ಮಾಡಿದ್ದಾರೆ. ಆದರೂ ಜನರು ಈ ಕವನ ತಿರುಚಿದ ಸಂಬಂಧ, ಕನ್ನಡ ರಾಜ್ಯೋತ್ಸವವನ್ನು ತಪ್ಪಾಗಿ ಬಿಂಬಿಸಿದ್ದರ ಸಂಬಂಧ ಜನರು ಕೇಳಿದ್ದ ಯಾವುದೇ ಪ್ರಶ್ನೆಗಳಿಗೂ ಈ ವರೆಗೂ ಉತ್ತರ ನೀಡುವ ಪ್ರಯತ್ನ ಮಾಡಿಲ್ಲ. ಆ ಮೂಲಕ ತಾವು ಬೌದ್ಧಿಕವಾಗಿ ದಿವಾಳಿಯಾಗಿರುವುದನ್ನು ಅವರು ಸಮಾಜಕ್ಕೆ ತಿಳಿಸಿದಂತಾಗಿದೆ.
ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಸೌಮ್ಯ ರೆಡ್ಡಿ ಅವರ ಬೌದ್ಧಿಕ ಸಾಮರ್ಥ್ಯಕ್ಕೆ ಈ ‘ಬ್ಲಾಕ್’ ‘ಅನ್ಬ್ಲಾಕ್’ ಆಟ ಕನ್ನಡಿ ಹಿಡಿದಂತಾಗಿದೆ. ಪ್ರಶ್ನೆಗಳಿಗೆ ಹೆದರಿ ಪಲಾಯನವಾದಿ ಕ್ರಮ ಅನುಸರಿಸುವ ಮೂಲಕ ತಮ್ಮ ನೈತಿಕತೆ ಏನು ಎಂಬುದನ್ನು ಸೌಮ್ಯ ಸಾಬೀತು ಮಾಡಿದಂತಾಗಿದೆ. ಒಟ್ಟಾರೆಯಾಗಿ ರಾಜ್ಯದ ಸಾಂಸ್ಕೃತಿಕ ಪರಂಪರೆಗೆ ಅವಹೇಳನ ಮಾಡುವ ಮೂಲಕ ಜನಪ್ರತಿನಿಧಿಗಳು ಸಮಾಜಕ್ಕೆ ಯಾವ ರೀತಿಯಲ್ಲಿ ಉದಾಹರಣೆಯಾಗಬಾರದು ಎಂಬುದಕ್ಕೆ ಕಾಂಗ್ರೆಸ್ ಪಕ್ಷದ ಸೌಮ್ಯ ತಮ್ಮ ಕೆಲಸದ ಮೂಲಕವೇ ಸಾಕ್ಷಿಯಾಗಿ ನಿಂತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.