ಬೆಂಗಳೂರು: ನಗರದಲ್ಲಿ ಚಿಂದಿ ಆಯುವ ಕೆಲಸ ಮಾಡುವವರ ಅವ್ಯವಸ್ಥೆಯನ್ನು ಸರಿಪಡಿಸಿ, ಕೆಲಸದ ಪರಿಸ್ಥಿತಿಯನ್ನು ಸುಧಾರಣೆ ಮಾಡುವ ಸಲುವಾಗಿ ‘ಸಾಮೂಹಿಕ ಶಕ್ತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಬಿಬಿಎಂಪಿ ಬೆಂಬಲದ ಜೊತೆಗೆ, ಸ್ವೀಡನ್ ಮೂಲದ ಎಚ್ ಮತ್ತು ಎಂ ಫೌಂಡೇಶನ್ ಧನ ಸಹಾಯವನ್ನೂ ಈ ಕಾರ್ಯಕ್ರಮ ಪಡೆದಿದೆ. ಅದರೊಂದಿಗೆ ಬಿಬಿಸಿ ಮೀಡಿಯಾ ಆಕ್ಷನ್, ಕೇರ್, ಹಸಿರು ದಳ, ಲೇಬರ್ ನೆಟ್, ಸೇವ್ ದಿ ಚಿಲ್ಡ್ರನ್, ಸೋಷಿಯಲ್ ಆಲ್ಫಾ, ವಾಟರ್ ಏಡ್ ಮತ್ತು ದಿ/ನಡ್ಜ್ ಫೌಂಡೇಶನ್ ಸಹ ಈ ಕಾರ್ಯಕ್ರಮದ ಭಾಗಗಳಾಗಿವೆ. ಚಿಂದಿ ಆಯುವವರಿಗೆ ಸುರಕ್ಷಿತ ಮತ್ತು ಗೌರವಯುತವಾಗಿ ಜೀವನ ನಡೆಸುವುದಕ್ಕೆ ಪೂರಕವಾಗುವಂತೆ ಹೆಚ್ಚಿನ ಏಜೆನ್ಸಿ ಹೊಂದುವ ದೃಷ್ಟಿಯಿಂದ ಈ ಕಾರ್ಯಕ್ರಮ ಆರಂಭಿಸಲಾಗಿದೆ.
ಈ ಸಂಬಂಧ ಮಾತನಾಡಿರುವ ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್, ಈ ವರೆಗೂ ಸುಮಾರು 8 ಸಾವಿರ ಮಂದಿ ಚಿಂದಿ ಆಯುವವರಿಗೆ ಐಡಿ ಕಾರ್ಡ್ ವಿತರಣೆ ಮಾಡಲಾಗಿದೆ. 198 ವಾರ್ಡ್ಗಳಲ್ಲಿ 168 ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳಿವೆ. ಇಂತಹ ಇನ್ನಷ್ಟು ಕೇಂದ್ರಗಳನ್ನು ಆರಂಭಿಸುವ ಹಿನ್ನೆಲೆಯಲ್ಲಿ ಕಾರ್ಯಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಚಿಂದಿ ಆಯುವವರಿಗೆ ತ್ಯಾಜ್ಯ ವಿಂಗಡಣೆಯ ಬಗೆಗೂ ಹೆಚ್ಚು ಜ್ಞಾನ ಹೊಂದಿದ್ದು, ಇದರಿಂದಾಗಿ ಕೋಟ್ಯಂತರ ರೂ. ಸರ್ಕಾರದ ಬೊಕ್ಕಸದಲ್ಲಿ ಉಳಿಯುವಂತಾಗಿದೆ. ಈ ವೆಚ್ಚ ಉಳಿಸುವಲ್ಲಿ ಚಿಂದಿ ಆಯುವವರ ಪಾತ್ರ ಮಹತ್ತರವಾದದ್ದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ಸಾಮೂಹಿಕ ಶಕ್ತಿ ಕಾರ್ಯಕ್ರಮ ಆರಂಭಿಸಲಾಗಿದ್ದು, ಇದು ಚಿಂದಿ ಆಯುವವರ ಜೀವನಕ್ಕೊಂದು ಸ್ಥಿರತೆ ಒದಗಿಸಲಿದೆ. ಜೊತೆಗೆ ಅವರ ಕುಟುಂಬದ ಸ್ಥಿರ ಆದಾಯದ ಹಿನ್ನೆಲೆಯಲ್ಲಿಯೂ ಮಹತ್ವದ ಪಾತ್ರ ವಹಿಸಲಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಗುಣಮಟ್ಟದ ಸೇವೆ ಸಾಧ್ಯವಾಗಲಿದೆ. ಚಿಂದಿ ಆಯುವವರ ಕೆಲಸದ ಪರಿಸ್ಥಿತಿ ಸಹ ಸುಧಾರಣೆ ಕಾಣಲಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.