ಮುಂಬಯಿ: ಭಾರತದ ವಾಣಿಜ್ಯ ನಗರ ಮುಂಬಯಿ ಮೇಲೆ ಪಾಕಿಸ್ಥಾನ ಮೂಲದ ಭಯೋತ್ಪಾದಕರು ದಾಳಿ ನಡೆಸಿದ ಕರಾಳ ಘಟನೆಗೆ ಇಂದಿಗೆ 12 ವರ್ಷ. ಈ ಭೀಕರ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರರನ್ನು ಇಂದು ದೇಶ ಸ್ಮರಿಸುತ್ತಿದೆ.
2008ರ ನವೆಂಬರ್ 26ರಂದು ನಡೆದ ಈ ಘಟನೆಯ ಕಾರ್ಯಾಚರಣೆ ಮೂರು ದಿನಗಳವರೆಗೆ ಮುಂದುವರೆದಿತ್ತು. ಸುಮಾರು 166 ಮಂದಿ ಇದರಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 300 ಮಂದಿ ಗಾಯಗೊಂಡಿದ್ದರು. ಈ ಘಟನೆ ಇಡೀ ದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿತ್ತು. ಇಂದಿಗೂ ಆ ನೋವನ್ನು ಯಾವ ಭಾರತೀಯನೂ ಮರೆತಿಲ್ಲ.
10 ಮಂದಿ ಉಗ್ರರು ಮುಂಬಯಿ ಮೇಲೆ ದಾಳಿ ನಡೆಸಿದ್ದರು, ಇದರಲ್ಲಿ ಕೊನೆಗೆ ಜೀವಂತವಾಗಿ ಭದ್ರತಾ ಪಡೆಗಳ ಕೈಗೆ ಸಿಕ್ಕಿದವನು ಅಜ್ಮಲ್ ಕಸಬ್. ಈತನನ್ನು ಬಳಿಕ ನೇಣುಗಂಬಕ್ಕೆ ಏರಿಸಿ ಹುತಾತ್ಮರಿಗೆ ನ್ಯಾಯ ದೊರಕಿಸಲಾಗಿತ್ತು.
“26/11 ರ ಸಂತ್ರಸ್ತರಿಗೆ ಮತ್ತು ಹುತಾತ್ಮರಿಗೆ ಹೃದಯಾಂತರಾಳದ ಗೌರವಗಳು. ಮುಂಬೈ ಜನರ ಶಕ್ತಿ ಮತ್ತು ಸ್ಥಿರತೆಗೆ ನಮನ. ಆ ದಿನ ಭಾರತಕ್ಕಾಗಿ ಶೌರ್ಯದಿಂದ ಹೋರಾಡಿದ ಮತ್ತು ಸರ್ವೋಚ್ಚ ತ್ಯಾಗ ಮಾಡಿದ ಎಲ್ಲ ಭದ್ರತಾ ಪಡೆ ಸಿಬ್ಬಂದಿಗೆ ನಾವು ಕೃತಜ್ಞರಾಗಿರುತ್ತೇವೆ” ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಟ್ವಿಟ್ ಮಾಡಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕೂಡ ಟ್ವಿಟ್ ಮಾಡಿ, ಮುಂಬಯಿ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಅರ್ಪಣೆ ಮಾಡಿದ್ದಾರೆ.
Heartfelt tributes to the victims & martyrs of 26/11 #MumbaiTerrorAttack & salute to the strength & resilience of people of Mumbai.
We will be eternally grateful to all the security forces personnel who valiantly fought & made the supreme sacrifice for Mother India on that day. pic.twitter.com/RlmyQ9diA6
— Piyush Goyal (@PiyushGoyal) November 26, 2020
मुंबई आतंकी हमले के शहीदों को नमन। #MumbaiTerrorAttack pic.twitter.com/qkkZWPKfzJ
— Nitin Gadkari (@nitin_gadkari) November 26, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.