ನವದೆಹಲಿ: ಟೈಯರ್ ತಯಾರಕರು ಈಶಾನ್ಯ ಭಾರತದಲ್ಲಿ ನೈಸರ್ಗಿಕ ರಬ್ಬರ್ ಉತ್ಪಾದಿಸಲು ಭಾರೀ ದೊಡ್ಡ ಪ್ರಮಾಣದಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಚೀನಾ ಮತ್ತು ಥೈಲ್ಯಾಂಡ್ನಿಂದ ಹೆಚ್ಚುತ್ತಿರುವ ಸಾಗಣೆಯನ್ನು ತಡೆಯಲು ಕೇಂದ್ರ ಸರ್ಕಾರವು ಜೂನ್ನಲ್ಲಿ ಟೈಯರ್ ಆಮದಿಗೆ ಪರವಾನಗಿಯನ್ನು ಕಡ್ಡಾಯ ಮಾಡಿತ್ತು, ಮಾತ್ರವಲ್ಲದೆ ಆಮದು ಶುಲ್ಕವನ್ನು ಹೆಚ್ಚಿಸಿತ್ತು. ಈ ಹಿನ್ನೆಲೆಯಲ್ಲಿ ಟೈಯರ್ ತಯಾರಕರು ಈಶಾನ್ಯದಲ್ಲಿ ರಬ್ಬರ್ ಉತ್ಪಾದನೆಗೆ ಮುಂದಾಗಿದ್ದಾರೆ.
ಈಶಾನ್ಯದಲ್ಲಿ ಹೆಚ್ಚಿನ ಇಳುವರಿ ನೀಡುವ ನೈಸರ್ಗಿಕ ರಬ್ಬರ್ ಉತ್ಪಾದಿಸಲು ಟೈಯರ್ ತಯಾರಕರು ಸುಮಾರು 1,100 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
“ಭಾರತದಲ್ಲಿ ಆಟೋ ಟೈಯರ್ ವಲಯವು ಸುಮಾರು 70 ಪ್ರತಿಶತದಷ್ಟು ನೈಸರ್ಗಿಕ ರಬ್ಬರ್ ಅನ್ನು ಬಳಸುತ್ತದೆ. ಇದು ಈಶಾನ್ಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ, ಈ ಕೆಲಸದಲ್ಲಿ ತೊಡಗಿರುವವರ ಜೀವನ ಮಟ್ಟವನ್ನು ಸುಧಾರಿಸುತ್ತದೆ, ಅವರಲ್ಲಿ ಹೆಚ್ಚಿನವರು ಬುಡಕಟ್ಟು ಮತ್ತು ಇತರ ಸಂಪನ್ಮೂಲ-ಬಡ ಸಮುದಾಯಗಳಿಂದ ಬಂದವರು ಎಂಬುದು ಗಮನಾರ್ಹ. ಸಂಸ್ಕರಿಸಿದ ನೈಸರ್ಗಿಕ ರಬ್ಬರ್ನ ಗುಣಮಟ್ಟದಲ್ಲಿನ ಸುಧಾರಣೆಯು ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಸಹಾಯ ಮಾಡುತ್ತದೆ ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೂಡಿಕೆಯ ಮೂಲಕ, ಪ್ರಸ್ತುತ 1200 ಕೆಜಿಯಿಂದ ಹೆಕ್ಟೇರ್ಗೆ ಸರಾಸರಿ ಇಳುವರಿಯನ್ನು 1500 ಕೆಜಿಗೆ ಹೆಚ್ಚಿಸುವ ಗುರಿ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.