ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಚೆನ್ನೈನಲ್ಲಿ 67,378 ಕೋಟಿ ರೂಪಾಯಿ ಮೌಲ್ಯದ ಹಲವಾರು ಮೂಲಸೌಕರ್ಯ ಯೋಜನೆಗಳಿಗೆ ಅಡಿಪಾಯ ಹಾಕಿದರು. ಅಲ್ಲದೆ, ನಗರದ ನೀರಿನ ಅವಶ್ಯಕತೆಗಳನ್ನು ಪೂರೈಸಲು ಅವರು ಚೆನ್ನೈ ಬಳಿಯ ಪ್ರಮುಖ ಜಲಾಶಯವನ್ನು ಉದ್ಘಾಟಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸ್ವಾಗತಿಸಲು ಚೆನ್ನೈ ವಿಮಾನ ನಿಲ್ದಾಣ ಮತ್ತು ಅವರ ಕಾರ್ಯಕ್ರದ ಸ್ಥಳವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬಾಳೆ ಮರಗಳ ಕಲಾತ್ಮಕ ಮಾದರಿಗಳಿಂದ ಅಲಂಕರಿಸಿದ್ದು ವಿಶೇಷವಾಗಿತ್ತು.
ಅವರು ಇಂದು ಆರಂಭಿಸಿದ ಪ್ರಮುಖ ಯೋಜನೆಗಳಲ್ಲಿ ಚೆನ್ನೈನಲ್ಲಿನ 61,843 ಕೋಟಿ ಮೆಟ್ರೊ ರೈಲು ಕಾರ್ಯಗಳ ಹಂತ -2 ಸೇರಿದೆ. ಕೊಯಮತ್ತೂರಿನ ಅರ್ಟೆರಿಯಲ್ ಅವಿನಾಶಿ ರಸ್ತೆಯಲ್ಲಿ 1620 ಕೋಟಿ ರೂಪಾಯಿಗಳ ರಸ್ತೆ ಯೋಜನೆಯ ಕಾಮಗಾರಿಗಳನ್ನು ಅವರು ಪ್ರಾರಂಭಿಸಿದ್ದು, ಇದು ತಮಿಳುನಾಡಿನಲ್ಲಿ ಇದುವರೆಗೆ ಅತಿ ಉದ್ದದ ಯೋಜನೆಯಾಗಿದೆ.
ಇಂಡಿಯನ್ ಆಯಿಲ್ನ ಹೊಸ ಟರ್ಮಿನಲ್ ಮತ್ತು ಲ್ಯೂಬ್ ಪ್ಲಾಂಟ್, ಚೆನ್ನೈ ಟ್ರೇಡ್ ಸೆಂಟರ್ ಮತ್ತು ಎನ್ನೋರ್ನ ಕಾಮರಾಜರ್ ಬಂದರು ವಿಸ್ತರಣೆ ಮತ್ತು ಕರೂರ್ ಜಿಲ್ಲೆಯ ಕಾವೇರಿ ನದಿಗೆ ಅಡ್ಡಲಾಗಿ ಹೊಸ ಬ್ಯಾರೇಜ್ ಕಾರ್ಯವನ್ನು ಅವರು ಇಂದು ಆರಂಭಿಸಿದರು.
ಅವರು ತಿರುವಳ್ಳೂರು ಜಿಲ್ಲೆಯ ಥರ್ವೊಯ್-ಕಂಡಿಗೈ ಜಲಾಶಯವನ್ನು ಜನರಿಗೆ ಅರ್ಪಿಸಿದರು, ಇದು ಚೆನ್ನೈನ ನೀರಿನ ಅಗತ್ಯಗಳನ್ನು ಪೂರೈಸುವ ಐದನೇ ಜಲಮೂಲವಾಗಿದೆ.
ಸುಮಾರು ಆರು ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಲು ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶದಿಂದ ಸಂಜೆ ಅವರು ರಾಜ್ಯ ಬಿಜೆಪಿಯ ಪ್ರಮುಖ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.
ಚೆನ್ನೈನ ಪೊಲೀಸರು ಸಚಿವರ ಭೇಟಿಯ ಹಿನ್ನೆಲೆಯಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.