ವಾರಣಾಸಿ: ಇದು ಒಂದು ಶತಮಾನದ ಹಿಂದೆ ವಾರಣಾಸಿ ಘಾಟ್ನಿಂದ ಕಳವುಗೊಂಡು ಕೆನಡಾದ ರೆಜಿನಾ ವಿಶ್ವವಿದ್ಯಾಲಯಕ್ಕೆ ತಲುಪಿದ್ದ ಅನ್ನಪೂರ್ಣ ದೇವಿಯ ಪುರಾತನ ವಿಗ್ರಹವನ್ನು ಕಾಶಿ ಶೀಘ್ರದಲ್ಲೇ ಮರಳಿ ಪಡೆಯಲಿದೆ. ನವೆಂಬರ್ 19 ರಿಂದ 25 ರವರೆಗೆ ನಡೆಯಲಿರುವ ವಿಶ್ವ ಪಾರಂಪರಿಕ ವಾರದ ಸಂದರ್ಭದಲ್ಲಿ ಕೆನಡಾದ ಯೂನಿರ್ಸಿಟಿಯ ಆರ್ಟ್ ಗ್ಯಾಲರಿಯಿಂದ ಪ್ರತಿಮೆಯು ಭಾರತಕ್ಕೆ ವಾಪಾಸ್ ಆಗುತ್ತಿದೆ ಎಂಬುದು ವಿಶೇಷ.
ಮ್ಯಾಕೆಂಜಿ ಆರ್ಟ್ ಗ್ಯಾಲರಿಯಲ್ಲಿರುವ ರೆಜಿನಾ ವಿಶ್ವವಿದ್ಯಾಲಯದ ಸಂಗ್ರಹದಲ್ಲಿ ಅನ್ನಪೂರ್ಣ ಪ್ರತಿಮೆ ಇದೆ. ಶೀಘ್ರದಲ್ಲೇ ಅದು ತನ್ನ ತವರು ಭಾರತಕ್ಕೆ ಪ್ರಯಾಣವನ್ನು ಪ್ರಾರಂಭಿಸಲಿದೆ. ವಿಶ್ವವಿದ್ಯಾಲಯದ ಉಪಕುಲಪತಿ ಥಾಮಸ್ ಚೇಸ್ ಮತ್ತು ಕೆನಡಾದಲ್ಲಿನ ಭಾರತದ ಹೈ ಕಮಿಷನರ್ ಅಜಯ್ ಬಿಸಾರಿಯಾ ಅವರ ನಡುವೆ ನವೆಂಬರ್ 19 ರಂದು ವಿಗ್ರಹದ ವರ್ಚುವಲ್ ವಾಪಾಸ್ಸಾತಿ ಸಮಾರಂಭ ನಡೆದಿರುವುದಾಗಿ ವಿಶ್ವವಿದ್ಯಾಲಯದ ಪತ್ರಿಕಾ ಹೇಳಿಕೆ ತಿಳಿಸಿದೆ. ಸಮಾರಂಭದಲ್ಲಿ ಮ್ಯಾಕೆಂಜಿ ಆರ್ಟ್ ಗ್ಯಾಲರಿ, ಗ್ಲೋಬಲ್ ಅಫೇರ್ಸ್ ಕೆನಡಾ ಮತ್ತು ಕೆನಡಾ ಬಾರ್ಡರ್ ಸರ್ವೀಸಸ್ ಏಜೆನ್ಸಿಯ ಪ್ರತಿನಿಧಿಗಳು ಭಾಗವಹಿಸಿದ್ದರು.
ಮ್ಯಾಕೆಂಜಿಯ ಶಾಶ್ವತ ಸಂಗ್ರಹಕ್ಕೆ ಒಂದು ಶತಮಾನದ ಹಿಂದೆ ತಪ್ಪಾಗಿ ಈ ವಿಗ್ರಹ ತಲುಪಿದೆ ಎಂಬ ಅಂಶವನ್ನು ಕಲಾವಿದ ದಿವ್ಯಾ ಮೆಹ್ರಾ ಹೇಳಿದ್ದಾರೆ.
ಮೆಹ್ರಾ ಸಂಶೋಧನೆಯ ಪ್ರಕಾರ, 1913 ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಅಪರಿಚಿತನೊಬ್ಬ ಈ ವಿಗ್ರಹವನ್ನು ಹೊಂದುವ ಬಯಕೆಯನ್ನು ಹೊಂದಿದ್ದ ಮತ್ತು ಗಂಗಾ ಉದ್ದಕ್ಕೂ ಕಲ್ಲಿನ ಮೆಟ್ಟಿಲುಗಳ ಮೇಲೆ ಇದ್ದ ದೇವಾಲಯದಿಂದ ವಿಗ್ರಹವನ್ನು ಕದ್ದು ಕೆನಡಾದ ಕಲಾ ಪೋಷಕನೊಬ್ಬನಿಗೆ ನೀಡಿದ್ದ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.