ಹಾಸನ: ಹಾಸನದ ದೋಡಗದ್ದವಳ್ಳಿಯ ಕ್ರಿ.ಶ 1113 ಕಾಲದ ಚತುಷ್ಕುಟ ದೇವಸ್ಥಾನದಲ್ಲಿನ ದಕ್ಷಿಣ ಕಾಳಿ ಅಥವಾ ಭದ್ರಕಾಳಿಯ ವಿಗ್ರಹವು ನಿನ್ನೆ ಮುರಿದು ಬಿದ್ದಿರುವುದು ಕಂಡು ಬಂದಿದ್ದು, ಪೊಲೀಸ್ ಅಧಿಕಾರಿಗಳು ತನಿಖೆಗೆ ಆರಂಭಿಸಿದ್ದಾರೆ.
ಪುರಾತತ್ವ ಇಲಾಖೆಯ ಸ್ಮಾರಕವಾದ ಈ ದೇವಾಲಯವನ್ನು 12 ನೇ ಶತಮಾನದಲ್ಲಿ ಹೊಯ್ಸಳ ರಾಜವಂಶವು ನಿರ್ಮಿಸಿದೆ ಎಂದು ಹೇಳಲಾಗಿದೆ.
ಪುರಾತತ್ವ ಶಾಸ್ತ್ರಜ್ಞ ಮತ್ತು ಇಂಡಾಲಜಿ ಸಂಶೋಧಕ ಮನೋಜ್ ಜಿ ಅವರು ದೇವಾಲಯಕ್ಕೆ ಉಕ್ಕಿನ ಬಾಗಿಲುಗಳನ್ನು ಅಳವಡಿಸುವ ಮೂಲಕ ಭಾರತೀಯ ಪುರಾತತ್ವ ಇಲಾಖೆ ದೇಗುಲವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ದೇವಾಲಯವು ರಾಜ್ಯದ ಸಂಸ್ಕೃತಿ ಮತ್ತು ಪುರಾತತ್ವ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಅವರು ವಿವರಿಸಿದರು. ದೇವಾಲಯವನ್ನು ಸರಿಯಾಗಿ ರಕ್ಷಿಸಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ದೇವಾಲಯವನ್ನು ನಿರ್ಮಿಸಿದ ಮಾಲಿಶೆಟ್ಟಿ ಮತ್ತು ಅವರ ಪತ್ನಿ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಭೇಟಿ ನೀಡಿದ್ದ ವೇಳೆ ‘ದಕ್ಷಿಣ ಕೊಲ್ಹಾಪುರ’ ನಿರ್ಮಿಸುವ ಕನಸು ಕಂಡಿದ್ದರು ಎಂದು ಮನೋಜ್ ಮಾಹಿತಿ ಹಂಚಿಕೊಂಡಿದ್ದಾರೆ.
ವಿಗ್ರಹ ಮುರಿದು ಬಿದ್ದಿರುವ ಹಿಂದೆ ಕುತಂತ್ರ ಇರುವ ಬಗ್ಗೆ ತನಿಖೆ ಆರಂಭಿಸಲಾಗಿದೆ. ಘಟನೆ ನಡೆದಾಗ ದೇವಾಲಯದಲ್ಲಿ ಕಾವಲುಗಾರರಿರಲಿಲ್ಲ, ಮತ್ತು ಘಟನೆ ನಡೆದಾಗ ಅದರ ಬಾಗಿಲು ಲಾಕ್ ಆಗಿರಲಿಲ್ಲ ಎಂದು ಹಾಸನದ ಪೊಲೀಸ್ ವರಿಷ್ಠಾಧಿಕಾರಿ ಆರ್ ಶ್ರೀನಿವಾಸ ಗೌಡ ಹೇಳಿದ್ದಾರೆ. ವಿಗ್ರಹವನ್ನು ಯಾರು ನಾಶಪಡಿಸಿದರು ಎಂಬುದರ ಕುರಿತು ನಾವು ಈಗಲೇ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.