ನವದೆಹಲಿ: ಕೋವಿಡ್ -19 ಲಸಿಕೆ ವಿತರಣೆ, ತಲುಪಿಸುವಿಕೆ ಮತ್ತು ಆಡಳಿತದ ಸನ್ನದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ನಿನ್ನೆ ನಡೆದ ಸಭೆಯಲ್ಲಿ, ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿರುವ ವಿಜ್ಞಾನಿಗಳು, ಶಿಕ್ಷಣ ತಜ್ಞರು ಮತ್ತು ಔಷಧ-ಕಂಪನಿಗಳ ಪ್ರಯತ್ನವನ್ನು ಪ್ರಧಾನಿ ಶ್ಲಾಘಿಸಿದರು ಮತ್ತು ಲಸಿಕೆಯ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆಗೆ ಅನುಕೂಲವಾಗುವಂತೆ ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ನಿರ್ದೇಶಿಸಿದರು.
ಐದು ಲಸಿಕೆಗಳು ಭಾರತದಲ್ಲಿ ಅಭಿವೃದ್ಧಿಯ ಮುಂದುವರಿದ ಹಂತಗಳಲ್ಲಿವೆ, ಅವುಗಳಲ್ಲಿ ನಾಲ್ಕು ಲಸಿಕೆ ಹಂತ II ಅಥವಾ III ಮತ್ತು ಒಂದು ಲಸಿಕೆ ಹಂತ -1 ಅಥವಾ II ರಲ್ಲಿವೆ. ಬಾಂಗ್ಲಾದೇಶ, ಮಯನ್ಮಾರ್, ಕತಾರ್, ಭೂತಾನ್, ಸ್ವಿಟ್ಜರ್ಲೆಂಡ್, ಬಹ್ರೇನ್, ಆಸ್ಟ್ರಿಯಾ ಮತ್ತು ದಕ್ಷಿಣ ಕೊರಿಯಾ ಮುಂತಾದ ದೇಶಗಳು ಭಾರತೀಯ ಲಸಿಕೆಗಳ ಅಭಿವೃದ್ಧಿ ಮತ್ತು ಅದರ ಬಳಕೆಗೆ ಸಹಭಾಗಿತ್ವ ವಹಿಸಲು ತೀವ್ರ ಆಸಕ್ತಿ ತೋರಿಸಿವೆ.
ಲಭ್ಯವಿರುವ ಮೊದಲ ಅವಕಾಶದಲ್ಲೇ ಲಸಿಕೆಯನ್ನು ನೀಡುವ ಪ್ರಯತ್ನ ಸಾಗುತ್ತಿದೆ. ಇದಕ್ಕಾಗಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರ ಡಾಟಬೇಸ್, ಕೋಲ್ಡ್ ಚೈನ್ ವೃದ್ಧಿ ಮತ್ತು ಸಿರಿಂಜ್ ಮತ್ತು ಸೂಜಿಗಳ ಸಂಗ್ರಹಗಳ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ.
ವ್ಯಾಕ್ಸಿನೇಷನ್ ಪೂರೈಕೆ ಸರಪಳಿಯನ್ನು ಹೆಚ್ಚಿಸಲಾಗುತ್ತಿದೆ ಮತ್ತು ಲಸಿಕೆ ರಹಿತ ಸರಬರಾಜನ್ನು ಹೆಚ್ಚಿಸಲಾಗುತ್ತಿದೆ. ವ್ಯಾಕ್ಸಿನೇಷನ್ ಕಾರ್ಯಕ್ರಮದ ತರಬೇತಿ ಮತ್ತು ಅನುಷ್ಠಾನದಲ್ಲಿ ವೈದ್ಯಕೀಯ ಮತ್ತು ಶುಶ್ರೂಷಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗಿಯಾಗಲಿದ್ದಾರೆ. ಆದ್ಯತೆಯ ತತ್ವಗಳ ಪ್ರಕಾರ ಲಸಿಕೆಗಳು ಪ್ರತಿ ಸ್ಥಳ ಮತ್ತು ವ್ಯಕ್ತಿಯನ್ನು ತಲುಪುತ್ತವೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನ ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.