ಬೆಂಗಳೂರು: ಕೊರೋನಾ ಸಂಕಷ್ಟದ ಬಳಿಕ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಇದಕ್ಕೆ ಅನುಗುಣವಾಗಿ ಕೆಎಸ್ಟಿಡಿಸಿ ರಾಜ್ಯದೆಲ್ಲೆಡೆ ಹಲವು ವಸತಿ ಗೃಹ, ಹೊಟೇಲ್ಗಳನ್ನು ಆರಂಭಿಸಿದೆ. ಅಲಮಟ್ಟಿ, ವಿಜಯಪುರ, ಬರಚುಕ್ಕಿ, ಬಿ ಆರ್ ಹಿಲ್ಸ್, ತುಂಗಭದ್ರಾ ಅಣೆಕಟ್ಟು ಮೊದಲಾದೆಡೆಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ರೂಮ್ ವ್ಯವಸ್ಥೆಗಳನ್ನು ರೂಪಿಸಿದೆ. ನವದೆಹಲಿಯ ಕರ್ನಾಟಕ ಭವನದಲ್ಲಿ 34 ಕೋಣೆಗಳನ್ನು ಸಹ ಪ್ರವಾಸಿಗರ ಅನುಕೂಲಕ್ಕಾಗಿ ಕೆಎಸ್ಟಿಡಿಸಿ ಸಿದ್ಧ ಮಾಡಿದೆ. ಒಟ್ಟಾರೆಯಾಗಿ ರಾಜ್ಯದೆಲ್ಲೆಡೆ ಕೆಎಸ್ಟಿಡಿಸಿ 122 ಕೋಣೆಗಳನ್ನು ಪ್ರವಾಸಿಗರ ಹಿತದೃಷ್ಟಿಯಿಂದ ಆರಂಭ ಮಾಡಿದೆ.
ಈ ಸಂಬಂಧ ಖಾಸಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಕೆಎಸ್ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಈ ಎಲ್ಲಾ ನೂತನ ನೀತಿಗಳು ಪ್ರವಾಸೋದ್ಯಮದ ಭಾಗಗಳಾಗಿವೆ. ಈ ಎಲ್ಲಾ ಕೊಠಡಿಗಳ ಶುಲ್ಕ ಮಾರುಕಟ್ಟೆಯ ಏರುಪೇರಿಗೆ ಅನುಗುಣವಾಗಿ ಬದಲಾವಣೆಯಾಗುತ್ತಿರುತ್ತವೆ. ಜೊತೆಗೆ ಈ ವರೆಗೆ ಬಳಕೆ ಮಾಡದ ಸರ್ಕಾರಿ ಅತಿಥಿ ಗೃಹಗಳನ್ನು ಸಹ ಪ್ರವಾಸೋದ್ಯಮ ನಿಗಮ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳುವ ಸಂಬಂಧ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.