ಮಂಗಳೂರು: ದೇಶದ ಅನಿಲ ಆರ್ಥಿಕತೆಗೆ ಉತ್ತೇಜನ ನೀಡುವಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಾಗಿದೆ. ಕೊಚ್ಚಿ-ಮಂಗಳೂರು ನಡುವಿನ 44 km ಉದ್ದದ ನೈಸರ್ಗಿಕ ಅನಿಲ ಪೈಪ್ಲೈನ್ ನಿರ್ಮಾಣವನ್ನು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿ. ಪೂರ್ಣಗೊಳಿಸಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಸುಮಾರು 2,915 ಕೋಟಿ ರೂ. ಗಳ ಯೋಜನೆ 2009 ರಲ್ಲಿಯೇ ಪ್ರಾರಂಭವಾಗಿದ್ದು, 2014 ರ ವೇಳೆ ಸಂಪೂರ್ಣಗೊಳಿಸುವ ಮತ್ತು ಕಾರ್ಯಾರಂಭ ಮಿಡುವ ನಿರೀಕ್ಷೆಯೂ ಇತ್ತು. ಆದರೆ ಈ ಯೋಜನೆಯ ಸುರಕ್ಷತೆ, ವಾಣಿಜ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತು ಇನ್ನೂ ಹಲವು ಕಾರಣಗಳಿಂದ ಸಾರ್ವತ್ರಿಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆ ಸಂಪೂರ್ಣಗೊಳ್ಳುವುದು ಆರು ವರ್ಷಗಳಷ್ಟು ತಡವಾಗಿದೆ. ಜೊತೆಗೆ ನಿರೀಕ್ಷೆಗಿಂತ ಹೆಚ್ಚು ಮೊತ್ತ ವೆಚ್ಚವಾಗಿದೆ. ಸದ್ಯ ಈ ಯೋಜನೆಯನ್ನು ಸಂಪೂರ್ಣ ಮಾಡಲು 5,750 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ.
ಈ ಯೋಜನೆಯ ಮೊದಲ ಹಂತವನ್ನು 2023 ರಲ್ಲಿ ಮೆಟ್ರೋಪೊಲಿಟನ್ ಏರಿಯಾ ಕೊಚ್ಚಿಯಲ್ಲಿ ನಿಯೋಜನೆ ಮಾಡಲಾಗಿತ್ತು. ಅದಾದ ಬಳಿಕ ಅದಾನಿ ಗ್ಯಾಸ್ ಗ್ಯಾಡ್, ಕೈಗಾರಿಕೆಗಳು ಮತ್ತು ದೇಶೀಯ ಬಳಕೆದಾರರಿಗೆ 2016 ರ ಫೆಬ್ರವರಿ ತಿಂಗಳಿನಿಂದ ಅನಿಲ ಪೂರೈಕೆ ಮಾಡಲು ತೊಡಗಿತ್ತು. ಪ್ರಸ್ತುತ ಕೊಚ್ಚಿಯಲ್ಲಿ ಈ ಪೈಪ್ಲೈನ್ ಮೂಲಕ ಪ್ರತಿ ನಿತ್ಯ 3.8 ಮಿಲಿಯನ್ ಕ್ಯೂಬಿಕ್ ಮೀ. ಅನಿಲ ಪೂರೈಕೆ ಮಾಡಲಾಗುತ್ತಿದೆ.
ಇದರೊಂದಿಗೆ ಕೊಚ್ಚಿ-ಮಂಗಳೂರು ನಡುವೆ ಪೈಪ್ಲೈನ್ ಅಳವಡಿಕೆ ಮಾಡುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದೆ. ಮಂಗಳೂರು ಪ್ರತಿದಿನ 2.5 ದಶಲಕ್ಷ ಕ್ಯೂಬಿಕ್ ಮೀ. ಅನಿಲ ಬಳಕೆಯ ಸಾಮರ್ಥ್ಯ ಹೊಂದಿದೆ. ಈ ಯೋಜನೆ ಕಾರ್ಯಗತವಾಗುವುದರಿಂದ ಕೇರಳದಲ್ಲಿ ಅನಿಲ ಬೇಡಿಕೆ 60 ದಶಲಕ್ಷ ಕ್ಯೂಬಿಕ್ ಮೀ. ಗಳಿಂದ 80-90 ಮಿಲಿಯನ್ ಕ್ಯೂಬಿಕ್ ಮೀ. ಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಈ ಯೋಜನೆ ರಾಜ್ಯ ಸರ್ಕಾರಕ್ಕೂ ಲಾಭದಾಯಕವಾಗಲಿದೆ. ವಾರ್ಷಿಕ ತೆರಿಗೆ 340 ಕೋಟಿ ರೂ ಈ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ಸೇರಲಿದೆ. ಹೊಸ ಮಾರ್ಗಗಳ ಆರಂಭದಿಂದ ವಾರ್ಷಿಕ 1 ಸಾವಿರ ಕೋಟಿಗಳಷ್ಟು ಆದಾಯ ಏರಿಕೆಯನ್ನು ನಿರೀಕ್ಷಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.