ನವದೆಹಲಿ: ಆರ್ಥಿಕ ತೊಂದರೆ ಮತ್ತು ಕರೋನಾ ಸಾಂಕ್ರಾಮಿಕ ಭಯದಿಂದ ಜನತೆ ನಿಧಾನಕ್ಕೆ ಹೊರಬರುತ್ತಿದ್ದಾರೆ. ಈ ಹಬ್ಬದ ಋತುವಿನಲ್ಲಿ ಖಾದಿ ಉತ್ಪನ್ನಗಳು ದಾಖಲೆಯ ಮಾರಾಟವನ್ನು ಕಂಡಿದ್ದು, ಖಾದಿ ಉದ್ಯಮದಲ್ಲಿರುವವರಿಗೆ ಹೆಚ್ಚಿನ ಲಾಭಾಂಶವನ್ನು ನೀಡಿದೆ. ಈ ವರ್ಷದ ಅಕ್ಟೋಬರ್ 2 ರಿಂದ ಕೇವಲ 40 ದಿನಗಳಲ್ಲಿ, ನವದೆಹಲಿಯ ಕೊನಾಟ್ ಪ್ಲೇಸ್ನಲ್ಲಿರುವ ಪ್ರಮುಖ ಖಾದಿ ಇಂಡಿಯಾ ಔಟ್ಲೆಟ್ನಲ್ಲಿ ಖಾದಿಯ ಏಕದಿನ ಮಾರಾಟದ ಅಂಕಿ ಅಂಶವು 4 ಪಟ್ಟು ಹೆಚ್ಚಾಗಿ 1 ಕೋಟಿ ರೂ ದಾಟಿದೆ.
ನವೆಂಬರ್ 13 ರಂದು, ಈ ಔಟ್ಲೆಟ್ನ ಒಟ್ಟು ಮಾರಾಟವು 1.11 ಕೋಟಿ ರೂ. ಆಗಿದ್ದು, ಈ ವರ್ಷ ದಾಖಲಾದ ಅತಿ ಹೆಚ್ಚು ಏಕದಿನ ಮಾರಾಟವಾಗಿದೆ. ಲಾಕ್ಡೌನ್ ನಂತರ ವ್ಯಾಪಾರ ಚಟುವಟಿಕೆಗಳು ಪುನರಾರಂಭವಾದಾಗಿನಿಂದ, ಖಾದಿ ಮಾರಾಟದ ಅಂಕಿ ಅಂಶಗಳು ಈ ವರ್ಷ ಗಾಂಧಿ ಜಯಂತಿ (ಅಕ್ಟೋಬರ್ 2) ರಂದು 1.02 ಕೋಟಿ ರೂ.ಗಳನ್ನು ಮುಟ್ಟಿದ್ದು, ಅಕ್ಟೋಬರ್ 24 ರಂದು 1.05 ಕೋಟಿ ರೂ. ಮತ್ತು ನವೆಂಬರ್ 7 ರಂದು 1.06 ಕೋಟಿ ರೂ.ಆಗಿದೆ.
ಕೆವಿಐಸಿ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ಅವರು, ಸ್ವದೇಶಿಯನ್ನು, ವಿಶೇಷವಾಗಿ ಖಾದಿಯನ್ನು ಉತ್ತೇಜಿಸಲು ಪ್ರಧಾನಮಂತ್ರಿಯವರ ಆಗಾಗ್ಗೆ ಮನವಿ ಮಾಡುತ್ತಿರುವುದು ಬೃಹತ್ ಮಾರಾಟವಾಗಲು ಕಾರಣವೆಂದು ಹೇಳಿದ್ದಾರೆ.
“ಖಾದಿ ಮತ್ತು ಗ್ರಾಮೋದ್ಯಮ ಕ್ಷೇತ್ರಗಳ ಬೆನ್ನೆಲುಬಾಗಿರುವ ಕುಶಲಕರ್ಮಿಗಳನ್ನು ಬೆಂಬಲಿಸಲು ಹೆಚ್ಚಿನ ಸಂಖ್ಯೆಯ ಖಾದಿ ಪ್ರಿಯರು ಬರುತ್ತಿರುವುದು ಹೃದಯಸ್ಪರ್ಶಿಯಾಗಿದೆ. ಸಾಂಕ್ರಾಮಿಕ ರೋಗದ ಹೊರತಾಗಿಯೂ, ಖಾದಿ ಕುಶಲಕರ್ಮಿಗಳು ಉತ್ಪಾದನಾ ಚಟುವಟಿಕೆಗಳನ್ನು ಸಂಪೂರ್ಣ ಹುರುಪಿನಿಂದ ಮುಂದುವರಿಸಿದ್ದಾರೆ ಮತ್ತು ದೇಶವಾಸಿಗಳು ಅದೇ ಉತ್ಸಾಹದಿಂದ ಖರೀದಿ ಮಾಡುತ್ತಿದ್ದಾರೆ ” ಎಂದು ಸಕ್ಸೇನಾ ಹೇಳಿದ್ದಾರೆ.
ಆರ್ಥಿಕ ಕುಸಿತದ ಹೊರತಾಗಿಯೂ, ಕೆವಿಐಸಿ ಖಾದಿಯ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.