ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಜೆಎನ್ಯು ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಎಡಪಂಥೀಯರ ವಿರೋಧದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಈ ಪ್ರತಿಮೆ ಅನಾವರಣಗೊಳ್ಳದೆ ಕೇಸರಿ ಬಟ್ಟೆಯಲ್ಲಿ ಮುಚ್ಚಿತ್ತು.
ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾವರಣಗೊಳಿಸಿದ್ದಾರೆ. ಪ್ರತಿಮೆ ಅನಾವರಣ ಮಾಡದಂತೆ ಜೆಎನ್ಯುನ ಕೆಲವು ಎಡಪಂಥೀಯರು ಮೋದಿಗೆ ಅಡ್ಡಗಾಲು ಹಾಕುವ ಪ್ರಯತ್ನವನ್ನೂ ಮಾಡಿದ್ದರು.
ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಮೋದಿ, “ಜೆಎನ್ಯು ಆವರಣದಲ್ಲಿನ ಸ್ವಾಮಿ ವಿವೇಕಾನಂದರ ಈ ಪ್ರತಿಮೆ ಎಲ್ಲರಿಗೂ ಪ್ರೇರಣೆ ನೀಡಲಿ. ಸ್ವಾಮಿ ವಿವೇಕಾನಂದರು ಪ್ರತಿಯೊಬ್ಬ ವ್ಯಕ್ತಿಯಲ್ಲಿ ನೋಡಲು ಬಯಸುತ್ತಿದ್ದ ಸಾಹಸ ಮತ್ತು ಧೈರ್ಯವನ್ನು ಈ ಪ್ರತಿಮೆ ನೀಡಲಿ. ಸ್ವಾಮಿ ವಿವೇಕಾನಂದರ ದರ್ಶನದ ಮುಖ್ಯ ಆಧಾರವಾಗಿರುವ ಸಹಾನುಭೂತಿ, ಅನುಕಂಪವನ್ನು ಈ ಪ್ರತಿಮೆ ನೀಡಲಿ” ಎಂದಿದ್ದಾರೆ.
“ಈ ಪ್ರತಿಮೆ ದೇಶವನ್ನು ಯುವ ನೇತೃತ್ವದ ಅಭಿವೃದ್ಧಿ ದೂರದೃಷ್ಟಿಯ ಜೊತೆಗೆ ಮುನ್ನಡೆಸುವ ಪ್ರೇರಣೆಯನ್ನು ನೀಡಲಿ. ಇದು ವಿವೇಕಾನಂದರ ಅಪೇಕ್ಷೆ ಕೂಡ ಆಗಿತ್ತು. ಈ ಪ್ರತಿಮೆ ಸಶಕ್ತ ಮತ್ತು ಸಮೃದ್ಧ ಭಾರತದ ಕನಸನ್ನು ಸಾಕಾರಗೊಳಿಸುವ ಪ್ರೇರಣೆ ನೀಡಲಿ” ಎಂದಿದ್ದಾರೆ.
ನಮ್ಮ ಆತ್ಮನಿರ್ಭರ ಭಾರತದ ಗುರಿ ಕೇವಲ ದೈಹಿಕ ಅಥವಾ ಯಾಂತ್ರಿಕ ಸ್ವಾವಲಂಬನೆಗೆ ಮಾತ್ರ ಮಿತಿಗೊಂಡಿಲ್ಲ. ಇದು ಕ್ರಿಯಾಶೀಲವಾಗಿದೆ ಮತ್ತು ಅತ್ಯಂತ ವಿಶಾಲವಾದ ವ್ಯಾಪ್ತಿ ಹೊಂದಿದೆ. ಚಿಂತನೆ, ಅಭ್ಯಾಸ ಮತ್ತು ಸಂಪನ್ಮೂಲದಲ್ಲಿ ಸ್ವಾವಲಂಬನೆಯಾದಾಗ ಮಾತ್ರ ಭಾರತ ಸ್ವಾವಲಂಬಿಯಾಗುತ್ತದೆ ಎಂದಿದ್ದಾರೆ.
ಭಾರತದ ಯುವಕರು ವಿಶ್ವದಾದ್ಯಂತ ಬ್ರ್ಯಾಂಡ್ ಇಂಡಿಯಾದ ರಾಯಭಾರಿಗಳಾಗಿದ್ದಾರೆ. ನಮ್ಮ ಯುವಕರು ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿನಿಧಿಗಳಾಗಿದ್ದಾರೆ. ನಮ್ಮ ಅಪೇಕ್ಷೆ ಕೇವಲ ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿರುವ ಭಾರತದ ಪರಿಚಯದ ಬಗ್ಗೆ ಹೆಮ್ಮೆ ಪಡುವುದು ಮಾತ್ರವಲ್ಲ, 21ನೇ ಶತಮಾನದ ಭಾರತದ ಹೊಸ ಪರಿಚಯದ ಬಗ್ಗೆಯೂ ಅಭಿಮಾನ ಪಡುವುದಾಗಿದೆ ಎಂದಿದ್ದಾರೆ.
ಯಾವಾಗೆಲ್ಲಾ ಭಾರತದ ಸಾಮರ್ಥ್ಯ ಹೆಚ್ಚಾಗಿದಯೋ ಆಗ ಇಡೀ ವಿಶ್ವಕ್ಕೆ ಪ್ರಯೋಜನವಾಗಿದೆ. ಭಾರತದ ಆತ್ಮನಿರ್ಭರ ಕಲ್ಪನೆ ಆತ್ಮವತ್ ಸರ್ವಭೂತೇಷು ಭಾವನೆಯೊಂದಿಗೆ ಬೆಸೆದುಕೊಂಡಿದೆ, ಸಂಪೂರ್ಣ ವಿಶ್ವದ ಕಲ್ಯಾಣದೊಂದಿಗೆ ಬೆಸೆದುಕೊಂಡಿದೆ. ಭಾರತ 21ನೇ ಶತಮಾನದ ವಿಶ್ವಕ್ಕೆ ಕೊಡುಗೆಯನ್ನು ನೀಡುವಂತೆ ಮಾಡುವುದೂ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.