ನವದೆಹಲಿ: ಸುಪ್ರೀಂಕೋರ್ಟ್ ಅನ್ನು ಅತ್ಯಂತ ಕೆಟ್ಟದಾಗಿ ಬಿಂಬಿಸಿದ ಸೋ ಕಾಲ್ಡ್ ಕಾಮಿಡಿಯನ್ ಕುನಾಲ್ ಕಮ್ರಾ ವಿರುದ್ಧ ಅಟಾರ್ನಿ ಜನರಲ್ ಆಫ್ ಇಂಡಿಯಾ ಕೆಕೆ ವೇಣುಗೋಪಾಲ್ ಅವರು ನ್ಯಾಯಾಂಗ ನಿಂದನೆಯ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮೋದನೆ ನೀಡಿದ್ದಾರೆ.
ವೇಣುಗೋಪಾಲ್ ತಮ್ಮ ಅನುಮೋದನಾ ಪತ್ರದಲ್ಲಿ, “ಆತನ ಮಾಡಿರುವ ಟ್ವೀಟ್ಗಳು ಅತ್ಯಂತ ಆಕ್ಷೇಪಾರ್ಹ ಮತ್ತು ಆತನ ಅಭಿಪ್ರಾಯ ನ್ಯಾಯಾಲಯ ನಿಂದನೆ ಅಪರಾಧವಾಗಿದೆ” ಎಂದು ಹೇಳಿದ್ದಾರೆ. ಅಲ್ಲದೇ, ಕೆಟ್ಟ ಅಭಿರುಚಿಯ ಟ್ವಿಟ್ ಆಗಿದೆ ಎಂದಿದ್ದಾರೆ.
ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ಗೆ ಜಾಮೀನು ನೀಡಿದ ತರುವಾಯ ಆತ ಸುಪ್ರೀಂಕೋರ್ಟ್ ಬಗ್ಗೆ ಅವಹೇಳನಕಾರಿಯಾದ ಟ್ವಿಟ್ಗಳನ್ನು ಮಾಡಿದ್ದಾನೆ. ಸುಪ್ರೀಂಕೋರ್ಟ್ ಬಣ್ಣವನ್ನು ಕೇಸರಿಗೆ ಬದಲಾಯಿಸಿ ಬಿಜೆಪಿ ಧ್ವಜ ಇರುವ ಫೋಟೋ ಹಾಕಿದ್ದಾನೆ. ಸುಪ್ರೀಂನಲ್ಲಿ ಗಾಂಧೀ ಫೋಟೋಗಳ ಬದಲು ಹರೀಶ್ ಸಾಲ್ವೆ ಫೋಟೋಗಳನ್ನು ಇಡಬೇಕು ಎಂದಿದ್ದಾನೆ.
ಆತನ ಈ ನೀಚ ಕೃತ್ಯಕ್ಕೆ ಭಾರೀ ಆಕ್ರೋಶಗಳು ವ್ಯಕ್ತವಾಗಿದೆ.
Contempt of court it seems 😂😂😂 pic.twitter.com/QOJ7fE11Fy
— Kunal Kamra (@kunalkamra88) November 11, 2020
The Supreme Court of this country is the the most Supreme joke of this country…
— Kunal Kamra (@kunalkamra88) November 11, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.