ನವದೆಹಲಿ: ಈ ಹಬ್ಬದ ಅವಧಿಯಲ್ಲಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ ನಂತರ, ಜವಳಿ ಸಚಿವಾಲಯವು ʼಲೋಕಲ್ ಫಾರ್ ದಿವಾಳಿʼ ಅಭಿಯಾನವನ್ನು ಪ್ರಾರಂಭಿಸಿದೆ. ಅಲ್ಲದೇ, ಭಾರತೀಯ ಕರಕುಶಲ ವಸ್ತುಗಳನ್ನು ಖರೀದಿಸಿ ಉಡುಗೊರೆಯಾಗಿ ನೀಡುವ ಮೂಲಕ ದೀಪಾವಳಿಯನ್ನು ಆಚರಿಸಲು ಜನರಿಗೆ ಮನವಿ ಮಾಡಿದೆ.
“ನವೆಂಬರ್ 9 ರಂದು ಪ್ರಧಾನಿ ನೀಡಿದ ಕರೆಯಿಂದ ಪ್ರೇರಿತರಾಗಿ, ಸ್ಥಳೀಯ ಜವಳಿ ಮತ್ತು ಕರಕುಶಲ ವ್ಯವಹಾರಕ್ಕೆ ನಮ್ಮ ಬೆಂಬಲವನ್ನು ತೋರಿಸಲು ಒಗ್ಗೂಡೋಣ” ಎಂದು ಜವಳಿ ಸಚಿವಾಲಯ ಬುಧವಾರ ಹೇಳಿಕೆಯಲ್ಲಿ ಮನವಿ ಮಾಡಿದೆ.
ಈ ದೀಪಾವಳಿಯಲ್ಲಿ ಮಣ್ಣಿನ ಹಣತೆ, ದೇಸಿ ಬಟ್ಟೆ, ಬೆಡ್ ಶೀಟ್, ಪರದೆ ಅಥವಾ ಕರಕುಶಲ ಸರಕುಗಳಂತಹ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಸಚಿವಾಲಯ ಜನರನ್ನು ಒತ್ತಾಯಿಸಿದೆ.
ನೇಕಾರರು, ಕುಶಲಕರ್ಮಿಗಳು, ಸ್ಥಳೀಯ ಮತ್ತು ಸಣ್ಣ ಉದ್ಯಮಗಳ ದೀಪಾವಳಿ ಮಾರಾಟವನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿಕೊಂಡಿದೆ. ಇದಕ್ಕಾಗಿ #Local4Diwali ಎಂಬ ಹ್ಯಾಶ್ಟ್ಯಾಗ್ ಬಳಸಿ ಟ್ವಿಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬೆಂಬಲವನ್ನು ತೋರಿಸುವಂತೆ ಜನರಿಗೆ ಮನವಿ ಮಾಡಿದೆ.
ಈ ದೀಪಾವಳಿಯಲ್ಲಿ ಸ್ಥಳೀಯವಾಗಿ ಖರೀದಿಸುವಂತೆ ದೇಶವಾಸಿಗಳನ್ನು ನವೆಂಬರ್ 9 ರಂದು ಪ್ರಧಾನಿ ಮೋದಿ ಒತ್ತಾಯಿಸಿದ ನಂತರ ಜವಳಿ ಸಚಿವಾಲಯ ಈ ಕ್ರಮವನ್ನು ಕೈಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.