ಲಂಡನ್: ‘ಸರಗರ್ಹಿ ಕದನ’ ದ ಧೈರ್ಯಶಾಲಿಗಳಿಗೆ ಕೃತಜ್ಞತೆಯ ಸಂಕೇತವಾಗಿ, 10,000 ಕ್ಕೂ ಹೆಚ್ಚು ಅಫ್ಘಾನ್ ಸೈನಿಕರ ವಿರುದ್ಧದ ಹೋರಾಟದ ಸಂದರ್ಭದಲ್ಲಿ 20 ಸಿಖ್ ಸೈನಿಕರನ್ನು ಮುನ್ನಡೆಸಿದ ಹವಿಲ್ದಾರ್ ಇಶರ್ ಸಿಂಗ್ ಅವರ ಒಂಬತ್ತು ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲು ಯುಕೆ ಸಜ್ಜಾಗಿದೆ.
1897 ರ ಸೆಪ್ಟೆಂಬರ್ 12 ರಂದು ಬ್ರಿಟಿಷ್ ಭಾರತೀಯ ಸೇನೆಯ ಸಿಖ್ ರೆಜಿಮೆಂಟ್ ಮತ್ತು ಅಫ್ಘಾನ್ ಬುಡಕಟ್ಟು ಜನಾಂಗದವರ ನಡುವೆ ಸರಗರ್ಹಿ ಯುದ್ಧವು ಅಂದಿನ ವಾಯುವ್ಯ ಗಡಿನಾಡು ಪ್ರಾಂತ್ಯದ (ಈಗ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ) ಒಂದು ಸಣ್ಣ ಹಳ್ಳಿಯಾದ ಸರಗರ್ಹಿಯಲ್ಲಿ ನಡೆಯಿತು.
ಬಂಗಾಳ ಕಾಲಾಳುಪಡೆಯ 36 ನೇ (ಸಿಖ್) ರೆಜಿಮೆಂಟ್ನ 21 ಜಾಟ್ ಸಿಖ್ ಸೈನಿಕರನ್ನು ಒಳಗೊಂಡ ಬ್ರಿಟಿಷ್ ಭಾರತೀಯ ದಳದ ಮೇಲೆ ಸೆಪ್ಟೆಂಬರ್ 1897 ರಲ್ಲಿ 10,000 ರಿಂದ 12,000 ಸಂಖ್ಯೆಯ ಅಫ್ಘನ್ನರು ಆಕ್ರಮಣ ಮಾಡಿದರು. ಈ ಸಂದರ್ಭದಲ್ಲಿ 20 ಸಿಖ್ ಸೈನಿಕರರು ಇವರ ವಿರುದ್ಧ ಹೋರಾಡಿದ ರೀತಿ ಇತಿಹಾಸದ ಪುಟದಲ್ಲಿ ಅಜರಾಮರವಾಗಿದೆ.
ಹವಿಲ್ದಾರ್ ಇಶರ್ ಸಿಂಗ್ ಅವರ ಒಂಬತ್ತು ಅಡಿ ಎತ್ತರದ ಕಂಚಿನ ಪ್ರತಿಮೆ ಬ್ರಿಟಿಷ್ ಭಾರತದಲ್ಲಿ ಬ್ರಿಟಿಷರ ಪರವಾಗಿ ಹೋರಾಡಿ ಪ್ರಾಣತೆತ್ತವರಿಗೆ ಅರ್ಪಿತವಾದ ಬ್ರಿಟನ್ನ ಮೊದಲ ಸ್ಮಾರಕವಾಗಿದೆ.
ಅಕ್ಷಯ್ ಕುಮಾರ್ ಅಭಿನಯದ ಬಾಲಿವುಡ್ ಚಿತ್ರ “ಕೇಸರಿ” ಸರಗರ್ಹಿ ಕದನವನ್ನು ಆಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.