ನವದೆಹಲಿ: ‘ಲವ್ ಜಿಹಾದ್’ ಅನ್ನು ವಿಜೃಂಭಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ತನಿಷ್ಕ್ ಜ್ಯುವೆಲ್ಲರಿ ಈಗ ಮತ್ತೊಮ್ಮೆ ಸುದ್ದಿ ಮಾಡಿದೆ. ಪಟಾಕಿ ಸಿಡಿಸಿ ದೀಪಾವಳಿ ಆಚರಿಸಬೇಡಿ ಎಂದು ಬೋಧನೆ ಮಾಡಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದೆ.
ಜಾಹೀರಾತಿನಲ್ಲಿ ಮಾಡೆಲ್ ಒಬ್ಬಳು, “ಪಟಾಕಿ ಬೇಡ, ಯಾರೊಬ್ಬರೂ ಕೂಡ ಪಟಾಕಿಯನ್ನು ಹೊತ್ತಿಸಬಾರದು. ಸಾಕಷ್ಟು ದೀಪ, ಭರವಸೆ ಮತ್ತು ಸಕಾರಾತ್ಮಕತೆಯನ್ನು ಬೆಳಗಿಸಬೇಕು” ಎನ್ನುತ್ತಾಳೆ. ತನಿಷ್ಕ್ ಜ್ಯುವೆಲ್ಲರಿಯ ಈ ಬೋಧನೆ ಹಲವರಿಗೆ ಇಷ್ಟವಾಗುತ್ತಿಲ್ಲ.
ಶಾಸಕ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಹಿಂದುಗಳಿಗೆ ಸಲಹೆ ನೀಡುವ ಈ ಜಾಹೀರಾತಿನ ವಿರುದ್ಧ ಕಿಡಿಕಾರಿದ್ದಾರೆ. ಕಂಪನಿಗಳು ತಮ್ಮ ಉತ್ಪನ್ನವನ್ನು ಮಾರಾಟ ಮಾಡುವ ಮೇಲೆ ಗಮನ ಹರಿಸಬೇಕೇ ಹೊರತು ನಾವು ಹೇಗೆ ಹಬ್ಬ ಆಚರಿಸಬೇಕು ಎಂದು ಬೋಧನೆ ಮಾಡಬಾರದು ಎಂದಿದ್ದಾರೆ.
ಟ್ವೀಟ್ ಮಾಡಿರುವ ಅವರು, “ಯಾಕೆ ಯಾರಾದರೂ ನಮ್ಮ ಹಬ್ಬವನ್ನು ಹೇಗೆ ಆಚರಿಸಬೇಕು ಎನ್ನುವ ಬಗ್ಗೆ ನಮಗೆ ಬೋಧಿಸಬೇಕು? ಕಂಪನಿಗಳು ತಮ್ಮ ಉತ್ಪನ್ನವನ್ನು ಮಾರಾಟ ಮಾಡುವ ಕಡೆ ಗಮನ ನೀಡಬೇಕು, ಪಟಾಕಿಗಳಿಂದ ಹೇಗೆ ದೂರವಿರಬೇಕು ಎನ್ನುವ ಬಗ್ಗೆ ಬೋಧನೆ ಮಾಡಬಾರದು. ನಾವು ದೀಪ ಹೊತ್ತಿಸುತ್ತೇವೆ, ಹಸಿರು ಪಟಾಕಿಗಳನ್ನು ಸಿಡಿಸುತ್ತೇವೆ ಮತ್ತು ಸಿಹಿ ಹಂಚುತ್ತೇವೆ. ನಮ್ಮನ್ನು ಸೇರಿಕೊಳ್ಳಿ, ಆಗ ನಿಮಗೆ ಏಕತ್ವಂ ಅರಿವಾಗುತ್ತದೆ” ಎಂದಿದ್ದಾರೆ.
Why should anyone advice Hindus how to celebrate Our Festivals?
Companies must focus on selling their products, not lecture us to refrain from bursting Crackers.
We will light lamps, distribute sweets and burst green crackers. Please join us. You will understand Ekatvam. https://t.co/EfmNNDXWFD
— C T Ravi 🇮🇳 ಸಿ ಟಿ ರವಿ (@CTRavi_BJP) November 8, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.