ಬಾಗಲಕೋಟೆ: ನಗರದ ಕಿಲ್ಲಾ ಗಲ್ಲಿಯ ನರೇಂದ್ರ ಯುವಕ ಮಂಡಲ ವಿಶಿಷ್ಟ ಸ್ವರೂಪದ ಕಾರ್ಯವನ್ನು ನಡೆಸುತ್ತಾ ಬಂದಿದ್ದು, ಇತ್ತೀಚೆಗೆ ನಿವೃತ್ತರಾದ ಸೈನಿಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.
ಸೈನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಾಗಲಕೋಟೆ ಜಿಲ್ಲೆಯ ಸೈನಿಕರ ಕಥೆಗಳನ್ನು ಯುವ ಜನರಿಗೆ ತಿಳಿಯ ಪಡಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಜೊತೆಗೆ ಸೈನ್ಯಕ್ಕೆ ಸೇರುವ ಉತ್ಸಾಹದಲ್ಲಿರುವ ಯುವಕರಿಗೆ ಆಪ್ತ ಸಮಾಲೋಚನೆಯ ಸಲುವಾಗಿಯೂ ಪೂರಕ ವೇದಿಕೆಯನ್ನು ಈ ಯುವಕ ಮಂಡಲದವರು ಒದಗಿಸುತ್ತಿದ್ದಾರೆ. ಸೈನ್ಯ ಸೇರುವಾಗ ಯುವಕರ ಕುಟುಂಬದಲ್ಲಿ ಬರುವ ಆತಂಕ, ಅಡಚಣೆಗಳನ್ನು ನಿವೃತ್ತ ಸೈನಿಕರ ಮೂಲಕ ಬಗೆಹರಿಸುವ, ಆ ಮೂಲಕ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ.
ಅದರೊಂದಿಗೆ ಸೈನ್ಯದಲ್ಲಿನ ನೇಮಕಾತಿಯ ಬಗ್ಗೆ ಮುಂದಿನ ದಿನಗಳಲ್ಲಿ ಕಾರ್ಯಗಾರ ಮಾಡುವ ಯೋಜನೆಯನ್ನು ಈ ಮಂಡಲದವರು ಹಾಕಿಕೊಂಡಿದ್ದಾರೆ. ಸೈನ್ಯದಲ್ಲಿನ ಅನುಭವ, ಪ್ರೇರಣಾದಾಯಿ, ಪರಿಣಾಮಕಾರಿ ಘಟನೆಗಳನ್ನು ಸಮಾಜಕ್ಕೆ ತಿಳಿಸುವ ಸಲುವಾಗಿ ಇಂತಹ ಮಾದರಿ ಕಾರ್ಯಕ್ರಮವನ್ನು ಮಂಡಲದ ಸದಸ್ಯರು ಹಮ್ಮಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಗೆ ಸಂಬಂಧಿಸಿದಂತೆ ಇರುವ, ಜಿಲ್ಲೆಯ ಆಸುಪಾಸಿನ, ಸೇನೆಯಿಂದ ಈಗ ತಾನೇ ನಿವೃತ್ತಿ ಹೊಂದಿದ ಸೈನಿಕರು ಇದ್ದರೆ ಈ ಮಂಡಲದವರಿಗೆ ಮಾಹಿತಿ ನೀಡುವಂತೆ ನರೇಂದ್ರ ಯುವಕ ಮಂಡಲದ ಸದಸ್ಯರು ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.