ನವದೆಹಲಿ: ಆದಾಯ ತೆರಿಗೆ ಇಲಾಖೆ ಕೇರಳದ ತಿರುವಲ್ಲದಲ್ಲಿರುವ ಬಿಲೀವರ್ಸ್ ಈಸ್ಟರ್ನ್ ಚರ್ಚ್ನ ಆವರಣದ ಮೇಲೆ ದಾಳಿ ನಡೆಸಿದೆ. ಈ ಚರ್ಚ್ ಅನ್ನು ಧರ್ಮ ಪ್ರಚಾರಕ ಕೆಪಿ ಯೊಹನ್ನ ಮುನ್ನಡೆಸುತ್ತಿದ್ದಾರೆ, ಅವರು ಚರ್ಚ್ಗೆ ಬರುವ ಅನುದಾನವನ್ನು ಮತಾಂತರ ಕಾರ್ಯಕ್ಕಾಗಿ ಬೇರಡೆ ಸಾಗಿಸುತ್ತಿದ್ದಾರೆ ಎಂಬ ಆರೋಪವಿದೆ.
ವರದಿಗಳ ಪ್ರಕಾರ, ಐ-ಟಿ ಇಲಾಖೆಯು ಚರ್ಚ್ಗೆ ದಾಳಿಯನ್ನು ಮಾಡಿ ದೊಡ್ಡ ಆರ್ಥಿಕ ಹಗರಣವನ್ನು ಬಯಲಿಗೆಳೆದಿದೆ ಮತ್ತು ರೂ. 8 ಕೋಟಿ ನಗದು ಹಣವನ್ನು ವಶಪಡಿಸಿಕೊಂಡಿದೆ. ಚಾರಿಟಿ ಫಂಡ್ಗಳನ್ನು ಬಳಸಿಕೊಂಡು ಮತಾಂತರ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವಾಲಯವು ಈ ಹಿಂದೆ ಬಿಲೀವರ್ಸ್ ಈಸ್ಟರ್ನ್ ಚರ್ಚ್ನ ಎಫ್ಸಿಆರ್ಎ ಪರವಾನಗಿಯನ್ನು ರದ್ದುಗೊಳಿಸಿತ್ತು.
ವರದಿಗಳ ಪ್ರಕಾರ, ಹಲವು ಟ್ರಸ್ಟ್ಗಳ ಮೂಲಕ ಬಿಲೀವರ್ಸ್ ಈಸ್ಟರ್ನ್ ಚರ್ಚ್ ಕಳೆದ 7 ವರ್ಷಗಳಲ್ಲಿ ರೂ.7,000 ಕೋಟಿಗಳನ್ನು ಪಡೆದುಕೊಂಡಿದೆ. ಚರ್ಚ್ ಈ ಹಣವನ್ನು ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಸಂಸ್ಥೆಗಳ ನಿರ್ಮಾಣದಲ್ಲಿ ಬಳಸಿಕೊಂಡಿತ್ತು. ಬಿಲೀವರ್ಸ್ ಚರ್ಚ್ ಪರವಾನಗಿ ರದ್ದಾದ ನಂತರವೂ ವಿವಿಧ ಟ್ರಸ್ಟ್ಗಳಿಂದ ಹಣವನ್ನು ಪಡೆಯುವುದನ್ನು ಮುಂದುವರೆಸಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಬಿಲೀವರ್ಸ್ ಈಸ್ಟರ್ನ್ ಚರ್ಚ್ ಹಲವಾರು ರಾಜಕೀಯ ಪಕ್ಷಗಳಿಂದ ಕೂಡ ಹಣವನ್ನು ಪಡೆದಿದೆ. ಪ್ರಸ್ತುತ ಐಟಿ ಇಲಾಖೆಯು ಇದರ 10 ವರ್ಷಗಳ ವಹಿವಾಟುಗಳನ್ನು ಪರಿಶೀಲಿಸುತ್ತಿದೆ.
“ಚರ್ಚ್ ಸರಿಯಾದ ಮಾರ್ಗಗಳ ಮೂಲಕ ವಿದೇಶಿ ಕೊಡುಗೆಗಳನ್ನು ಪಡೆದಿದೆ. ಆದರೆ ಅವರು ಧಾರ್ಮಿಕ ಉದ್ದೇಶಗಳಿಗಾಗಿ ದತ್ತಿ ಹಣವನ್ನು ಬೇರೆಡೆಗೆ ತಿರುಗಿಸಿದ್ದಾರೆ. ಎಫ್ಸಿಆರ್ಎ ಖಾತೆಯನ್ನು ರದ್ದುಗೊಳಿಸಿದ ನಂತರವೂ ಚರ್ಚ್ ಇತರ ಟ್ರಸ್ಟ್ಗಳ ಮೂಲಕ ಹಣವನ್ನು ಪಡೆಯಲು ಪ್ರಯತ್ನಿಸಿದೆ ”ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.