ಕಠ್ಮಂಡು: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಅವರಿಗೆ ನೇಪಾಳಿ ಸೇನೆಯ ಗೌರವ ಜನರಲ್ ಹುದ್ದೆಯನ್ನು ನೀಡಿ ಗೌರವಿಸಲಾಗಿದೆ. ನೇಪಾಳದ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ ಕಠ್ಮಂಡುವಿನಲ್ಲಿ ಈ ಗೌರವ ಪ್ರದಾನ ಮಾಡಿದರು.
ನಿನ್ನೆ ಕಠ್ಮಂಡುವಿನ ರಾಷ್ಟ್ರಪತಿಗಳ ಅಧಿಕೃತ ನಿವಾಸ ‘ಶೀತಲ್ ನಿವಾಸ್’ ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ನರವಾಣೆ ಅವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಅವರಿಗೆ ಕತ್ತಿ ಮತ್ತು ಸ್ಕ್ರಾಲ್ ಸಹ ನೀಡಲಾಯಿತು. ಸಮಾರಂಭದಲ್ಲಿ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ಭಾರತೀಯ ರಾಯಭಾರಿ ವಿನಯ್ ಎಂ. ಕ್ವಾತ್ರಾ ಮತ್ತು ಎರಡೂ ದೇಶಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮಾರಂಭದ ನಂತರ, ಜನರಲ್ ನರವಾಣೆ ನೇಪಾಳ ಅಧ್ಯಕ್ಷರನ್ನು ಭೇಟಿ ಮಾಡಿದರು ಮತ್ತು ಗೌರವಕ್ಕೆ ಕೃತಜ್ಞತೆಯನ್ನು ತಿಳಿಸಿದರು ಮತ್ತು ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವ ಕ್ರಮಗಳ ಬಗ್ಗೆ ಚರ್ಚಿಸಿದರು.
ಮುಂಜಾನೆ, ಜನರಲ್ ನರವಾಣೆ ನೇಪಾಳ ರಾಜಧಾನಿಯಲ್ಲಿರುವ ಬೀರ್ ಸ್ಮಾರಕ್ ಅಂದರೆ ಹುತಾತ್ಮರ ಸ್ಮಾರಕಕ್ಕೆ ತೆರಳಿ ಮಾಲಾರ್ಪಣೆ ಮಾಡಿ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಭಾರತ ಸರ್ಕಾರದ ಪರವಾಗಿ ಅವರು ನೇಪಾಳ ಸೇನೆಯ ಎರಡು ಕ್ಷೇತ್ರ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರ ಮಾಡಿದರು. ಇದು ಎಕ್ಸ್-ರೇ ಯಂತ್ರಗಳು, ಕಂಪ್ಯೂಟೆಡ್ ರೇಡಿಯಾಗ್ರಫಿ ವ್ಯವಸ್ಥೆಗಳು, ಐಸಿಯು ವೆಂಟಿಲೇಟರ್ಗಳು ಮತ್ತು ಆಂಬುಲೆನ್ಸ್ಗಳಂತಹ ಸಾಧನಗಳನ್ನು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.