ನವದೆಹಲಿ: ಪ್ರಸಕ್ತ ಖಾರಿಫ್ ಮಾರ್ಕೆಟಿಂಗ್ ಋತುವಿನಲ್ಲಿ ಭತ್ತದ ಖರೀದಿ ಕಳೆದ ವರ್ಷಕ್ಕಿಂತ ಶೇಕಡಾ 20.18 ರಷ್ಟು ಹೆಚ್ಚಾಗಿದೆ.
ಕೃಷಿ ಸಚಿವಾಲಯವು ಕಳೆದ ವರ್ಷ ಸುಮಾರು 186 ಲಕ್ಷ ಟನ್ ಖರೀದಿ ಮಾಡಿತ್ತು, ಆದರೆ ಈ ವರ್ಷ 224 ಲಕ್ಷ ಟನ್ ಭತ್ತವನ್ನು ಖರೀದಿಸಿದೆ.
ಈ ಖರೀದಿಗಳಿಂದ ಸುಮಾರು 18 ಲಕ್ಷ 91 ಸಾವಿರ ರೈತರು ಕನಿಷ್ಠ ಬೆಂಬಲ ಬೆಲೆ ಮೌಲ್ಯದೊಂದಿಗೆ ರೂ. 42,422 ಕೋಟಿ ಪಡೆಯಲಿದ್ದಾರೆ.
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ್, ತಮಿಳುನಾಡು, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಕೇರಳ, ಗುಜರಾತ್ ಮತ್ತು ಆಂಧ್ರಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭತ್ತದ ಖರೀದಿಯು ಉತ್ತಮ ವೇಗದಲ್ಲಿ ಸಾಗುತ್ತಿದೆ.
ಒಟ್ಟು ಭತ್ತದ ಖರೀದಿಯ ಪೈಕಿ ಪಂಜಾಬ್ ಒಂದೇ 158 ಲಕ್ಷ ಟನ್ ಕೊಡುಗೆ ನೀಡಿದೆ ಎಂದು ಸಚಿವಾಲಯ ತಿಳಿಸಿದೆ. ಇದು ಒಟ್ಟು ಖರೀದಿಯ ಶೇಕಡಾ 70.52 ಆಗಿದೆ.
ಖಾರಿಫ್ ಮಾರ್ಕೆಟಿಂಗ್ ಸೀಸನ್ 2020 ಬೆಲೆ ಬೆಂಬಲ ಯೋಜನೆಯಡಿ ರಾಜ್ಯಗಳ ಪ್ರಸ್ತಾವನೆಯ ಆಧಾರದ ಮೇಲೆ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಒಡಿಶಾ, ರಾಜಸ್ಥಾನ ಮತ್ತು ಆಂಧ್ರಪ್ರದೇಶಗಳಿಂದ 45 ಲಕ್ಷ ಟನ್ ಧಾನ್ಯ ಮತ್ತು ಎಣ್ಣೆಬೀಜಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.