ಮಂಗಳೂರು: ವಿದ್ಯಾದಾನ ಹಾಗೂ ಬಡವರ ಸೇವೆಯೇ ಧ್ಯೇಯ ಎಂಬ ಪರಿಕಲ್ಪನೆಯೊಂದಿಗೆ 3 ವರ್ಷ 9 ತಿಂಗಳ ಪಯಣದ ಸಾರ್ಥಕತೆಯೊಂದಿಗೆ ಸುಮಾರು 42 ಸೇವಾರ್ಶಿತರಿಗೆ ಸಹಾಯಹಸ್ತ ನೀಡಿ ಯುವಕರ ಸ್ಪೂರ್ತಿಯ ಚಿಲುಮೆಯಾದ “ವೀರಾಂಜನೇಯ ಸೇವಾ ಸಮಿತಿ” 01/11/2020ರಂದು ಮತ್ತೆ ಒಂದು ಬಡಕುಟುಂಬಕ್ಕೆ ಸಹಾಯಹಸ್ತ ನೀಡಿ , ಬಡವರ ಪಾಲಿನ ಅಪತ್ಪಾಂಧವನಾಗಿ ಮುಂದುವರಿದಿದೆ.
ಮಾನವೀಯ ಮೌಲ್ಯದ ಚಿಂತನೆಯೊಂದಿಗೆ, ಉತ್ತಮ ನೈತಿಕತೆ, ಸಂಸ್ಕಾರ-ಸಂಸ್ಕೃತಿಯನ್ನು ತಿಳಿಯಪಡಿಸಿ, ಆದರ್ಶ ಹಿಂದೂರಾಷ್ಟ್ರ (ಸಮಾಜ )ನಿರ್ಮಾಣದ ಧೈಯದೊಂದಿಗೆ, ಹಿಂದೂ ಸಮಾಜದ ಅಶಕ್ತರ ಕಷ್ಟಗಳನ್ನು ಅರಿತು, ಅವರಿಗೆ ಅಗತ್ಯ ಸಹಾಯ ನೀಡಲು ಸಮಾಜದೊಂದಿಗೆ ಬೆರೆತ ಯುವಮನಸ್ಸುಗಳ ಜೀವನದ ಸಾರ್ಥಕತೆಯೇ “ವೀರಾಂಜನೇಯ”
38ನೇ ಸೇವಾಯೋಜನೆಯ ಹಸ್ತಾಂತರ:-
ಬಂಟ್ವಾಳ ತಾಲೂಕಿನ ವಿಟ್ಲದ ಶೋಭಾ ಇವರು ಜಾರಿ ಬಿದ್ದು ಕಾಲು ಮುರಿತ್ತಕ್ಕೊಳಗಾಗಿದ್ದರು. ಇವರ ಗಂಡ ಕೂಡ ಒಂದು ತಿಂಗಳ ಹಿಂದೆ ಕಿಡ್ನಿ ವೈಫಲ್ಯದಿಂದ ದೈವಧೀನರಾಗಿದ್ದಾರೆ. ಇವರು ತೀರಾ ಬಡತನದಿಂದ ಎರಡು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಈ ಬಡಕುಟುಂಬದ ಕಷ್ಟಗಳನ್ನು ಗುರುತಿಸಿದ ಶ್ರೀ ವೀರಾಂಜನೇಯ ಸೇವಾ ಸಮಿತಿಯು ತಮ್ಮ ತಂಡದಿಂದ ಸಂಗ್ರಹಿಸಿದ 15,000ರೂ ಸಹಾಯಧನದ ಚೆಕ್ಕನ್ನು ತಂಡದ ಸಹೋದರರ ಸಮ್ಮುಖದಲ್ಲಿ ಶೋಭಾ ಇವರ ಬಡಕುಟುಂಬಕ್ಕೆ ಹಸ್ತಾಂತರಿಸಿದೆ.
ಈ ಯೋಜನೆಯ ಯಶಸ್ಸಿನೊಂದಿಗೆ ವೀರಾಂಜನೇಯ ಸೇವಾ ಸಮಿತಿಯು 38 ಮಾಸಿಕ ಸಹಾಯ ಯೋಜನೆ ಹಾಗೂ 5 ತುರ್ತು ಯೋಜನೆ ಯಶಸ್ವಿಯಾದಂತಾಗಿದೆ, ಈ ಯಶಸ್ಸಿನ ಸರ್ವಪಾಲು ಶ್ರೀ ವೀರಾಂಜನೇಯ ಸೇವಾ ಸಮಿತಿ ಗುಂಪಿನ ಸರ್ವ ಸದಸ್ಯರಿಗೂ ಸಲ್ಲುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.