ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ಪುಸ್ತಕಗಳನ್ನು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ತಿಂಗಳಿನಲ್ಲಿ 25% ದರ ಕಡಿತದೊಂದಿಗೆ ಮಾರಾಟ ಮಾಡಲಾಗುವುದಾಗಿ ತಿಳಿಸಿದೆ.
ವ್ಯಕ್ತಿತ್ವ ವಿಕಸನ, ಜೀವನ ಚರಿತ್ರೆ, ಆರೋಗ್ಯ, ಮಕ್ಕಳ ಸಾಹಿತ್ಯ ಸೇರಿದಂತೆ ಇನ್ನೂ ಅನೇಕ ಬಗೆಯ ಸಾಹಿತ್ಯ ಕೃತಿಗಳನ್ನು ರಾಷ್ಟ್ರೋತ್ಥಾನ ಪ್ರಕಟಿಸಿದೆ. ಜೊತೆಗೆ 610 ಭಾರತ-ಭಾರತಿ ಪುಸ್ತಕ ಮತ್ತು ಇತರ 240 ಪುಸ್ತಕಗಳನ್ನು ಸಹ ರಾಷ್ಟ್ರೋತ್ಥಾನ ಪ್ರಕಟಿಸಿದೆ. ಈ ಪುಸ್ತಕಗಳನ್ನು ದರ ಕಡಿತ ಮಾರಾಟ ಮಾಡಲು ಮುಂದಾಗಿದೆ. ಜೊತೆಗೆ ರಾಜ್ಯದ ಎಲ್ಲೆಡೆ ಪುಸ್ತಕಗಳನ್ನು ಕಳುಹಿಸಿಕೊಡುವ ನಿಟ್ಟಿನಲ್ಲಿಯೂ ಪೂರಕ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.
ಪುಸ್ತಕಗಳನ್ನು ಖರೀದಿ ಮಾಡಲು ಬಯಸುವವರು ರಾಷ್ಟ್ರೋತ್ಥಾನ ಪುಸ್ತಕ ಮಳಿಗೆಗಳಲ್ಲಿ ಖರೀದಿ ಮಾಡಬಹುದು. ಜೊತೆಗೆ ಆನ್ಲೈನ್ ಮೂಲಕವೂ ಪುಸ್ತಕ ಖರೀದಿಗೆ ಅವಕಾಶವಿದ್ದು www.sahityabooks.com ನಲ್ಲಿ ಖರೀದಿಸಬಹುದಾಗಿದೆ ಎಂದು ತಿಳಿಸಿದೆ. ಹೆಚ್ಚಿನ ಮಾಹಿತಿ ಪಡೆಯಲು 080-26612730, 9880288909 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
4 ಹೊಸ ಪುಸ್ತಕಗಳು ಗೂಗಲ್ ಪ್ಲೇ ಬುಕ್ನಲ್ಲಿಯೂ ಲಭ್ಯವಿದೆ ಎಂದು ರಾಷ್ಟ್ರೋತ್ಥಾನ ಮಾಹಿತಿ ನೀಡಿದ್ದು, ಇವುಗಳನ್ನು ಇ-ಬುಕ್ ರೂಪದಲ್ಲಿ ಓದಬಹುದಾಗಿದೆ ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.