ನವದೆಹಲಿ: ಭಾರತೀಯ ನೌಕಾ ಹಡಗು ಐರಾವತ್ ʼಮಿಷನ್ ಸಾಗರ್ -2ʼ ಅಂಗವಾಗಿ ನಿನ್ನೆ ಪೋರ್ಟ್ ಸುಡಾನ್ ತಲುಪಿದೆ.
ನೈಸರ್ಗಿಕ ವಿಪತ್ತುಗಳು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುವ ಸಲುವಾಗಿ ಭಾರತ ಸರ್ಕಾರ ಸೌಹಾರ್ದ ವಿದೇಶಿ ದೇಶಗಳಿಗೆ ನೆರವನ್ನು ನೀಡುತ್ತಲೇ ಬಂದಿದೆ. ಅದೇ ರೀತಿ ಐಎನ್ಎಸ್ ಐರಾವತ್ ಕೂಡ 100 ಟನ್ ಆಹಾರವನ್ನು ಸುಡಾನ್ ಜನರಿಗೆ ಹೊತ್ತೊಯ್ದಿದೆ.
ಮಿಷನ್ ಸಾಗರ್- II, ಮೇ-ಜೂನ್ 2020 ರಲ್ಲಿ ಕೈಗೊಂಡ ಮೊದಲ ‘ಮಿಷನ್ ಸಾಗರ್’ನ ಎರಡನೇ ಆವೃತ್ತಿಯಾಗಿದೆ. ಮೊದಲ ಆವೃತ್ತಿಯಲ್ಲಿ ಭಾರತ ಮಾಲ್ಡೀವ್ಸ್, ಮಾರಿಷಸ್, ಸೀಶೆಲ್ಸ್, ಮಡಗಾಸ್ಕರ್ ಮತ್ತು ಕೊಮೊರೊಗಳಿಗೆ ಆಹಾರ ಮತ್ತು ಔಷಧಿಗಳನ್ನು ಒದಗಿಸಿದೆ.
ಮಿಷನ್ ಸಾಗರ್ -2 ರ ಭಾಗವಾಗಿ, ಐಎನ್ಎಸ್ ಐರಾವತ್ ಸುಡಾನ್, ದಕ್ಷಿಣ ಸುಡಾನ್, ಜಿಬೌಟಿ ಮತ್ತು ಎರಿಟ್ರಿಯಾಗಳಿಗೆ ಆಹಾರ ನೆರವನ್ನು ನೀಡಲಿದೆ.
ಮಿಷನ್ ಸಾಗರ್- II ಈ ಪ್ರದೇಶದ ಎಲ್ಲರ ಸುರಕ್ಷತೆ ಮತ್ತು ಬೆಳವಣಿಗೆಯ ಪ್ರಧಾನ ಮಂತ್ರಿಗಳ ದೃಷ್ಟಿಕೋನಕ್ಕೆ ಅನುಗುಣವಾಗಿದೆ ‘ಸಾಗರ್’ ಮತ್ತು ತನ್ನ ಕಡಲ ನೆರೆಹೊರೆಯವರೊಂದಿಗಿನ ಸಂಬಂಧಗಳಿಗೆ ಭಾರತವು ನೀಡಿರುವ ಮಹತ್ವವನ್ನು ತೋರಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.