ನವದೆಹಲಿ: ಕೇಂದ್ರ ಸರ್ಕಾರ ಆರ್ಥಿಕತೆಯ ವಿವಿಧ ಕ್ಷೇತ್ರಗಳ ಪುನರಾರಂಭ, ಹಬ್ಬಗಳ ಋತುವಿನಲ್ಲಿ ಬೇಡಿಕೆಯ ಹೆಚ್ಚಳ ನಿರೀಕ್ಷೆಯ ದೃಷ್ಟಿಯಿಂದ ತುರ್ತು ಸಾಲ ಖಾತ್ರಿ ಯೋಜನೆ (ಇಸಿಎಲ್.ಜಿ.ಎಸ್) 2020 ರ ನ. 30 ರವರೆಗೆ ಒಂದು ತಿಂಗಳುಗಳ ಕಾಲ ಅಥವಾ 3 ಲಕ್ಷ ರೂ. ಗಳನ್ನು ಯೋಜನೆ ಅಡಿಯಲ್ಲಿ ಮಂಜೂರಾತಿ ಸಮಯದವರೆಗೆ ಆದ್ಯತೆಗೆ ಅನುಗುಣವಾಗಿ ಅನ್ವಯವಾಗುವಂತೆ ವಿಸ್ತರಿಸಿದೆ.
ಈ ವಿಸ್ತರಣೆಯು ಈವರೆಗೆ ಯೋಜನೆಯ ಲಾಭವನ್ನು ಪಡೆಯದೇ ಇರುವ ಸಾಲಗಾರರಿಗೆ, ಸಾಲ ಪಡೆಯಲು ಮತ್ತಷ್ಟು ಅವಕಾಶವನ್ನು ಒದಗಿಸುತ್ತದೆ. ಎಂ.ಎಸ್.ಎಂ.ಇ.ಗಳು, ವಾಣಿಜ್ಯ ಸಂಸ್ಥೆಗಳು, ವಾಣಿಜ್ಯ ಉದ್ದೇಶದ ವೈಯಕ್ತಿಕ ಸಾಲ ಮತ್ತು ಮುದ್ರಾ ಯೋಜನೆಯಡಿ ಸಾಲ ಪಡೆದವರಿಗೆ ಅವರು 29 ಮಾರ್ಚ್ 2020ರವರೆಗೆ ಉಳಿಸಿಕೊಂಡಿರುವ ಸಾಲದ ಬಾಕಿಯ ಮೇಲೆ ಶೇ.20ರಷ್ಟು ಸಂಪೂರ್ಣ ಖಾತ್ರಿಯ ಮತ್ತು ಮೇಲಾಧಾರ ರಹಿತವಾದ ಹೆಚ್ಚುವರಿ ಸಾಲ ಒದಗಿಸಲು ಇ.ಸಿ.ಎಲ್.ಜಿ.ಎಸ್. ಅನ್ನು ಆತ್ಮನಿರ್ಭರ ಪ್ಯಾಕೇಜ್ (ಎ.ಎನ್.ಬಿ.ಪಿ.) ಭಾಗವಾಗಿ ಪ್ರಕಟಿಸಲಾಗಿತ್ತು.
29 ಫೆಬ್ರವರಿ 2020 ರಲ್ಲಿ 50 ಕೋಟಿ ರೂ. ಸಾಲ ಬಾಕಿ ಇರುವ ಮತ್ತು ವಾರ್ಷಿಕ ವಹಿವಾಟು 250 ಕೋಟಿ ರೂ. ಹೊಂದಿರುವವರು ಯೋಜನೆಯಡಿ ಸಾಲ ವಹಿವಾಟು ನಡೆಸಲು ಅರ್ಹರಾಗಿರುತ್ತಾರೆ. ಯೋಜನೆಯಡಿ ಬಡ್ಡಿದರವನ್ನು ಬ್ಯಾಂಕುಗಳು ಮತ್ತು ಎಫ್.ಐಗಳಿಗೆ ಶೇ. 9.25 ಮತ್ತು ಎನ್.ಬಿಎಫ್.ಸಿ.ಗಳಿಗೆ ಶೇ. 14 ಎಂದು ನಿಗದಿಪಡಿಸಲಾಗಿದೆ. ಯೋಜನೆಯಡಿಯಲ್ಲಿ ಒದಗಿಸಲಾದ ಸಾಲಗಳ ಅವಧಿ ನಾಲ್ಕು ವರ್ಷಗಳಾಗಿವೆ. ಇದರಲ್ಲಿ ಅಸಲು ಮರುಪಾವತಿಯ ಮೇಲಿನ ಒಂದು ವರ್ಷದ ಕಂತು ಪಾವತಿ ಮುಂದೂಡಿಕೆಯೂ ಸೇರಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಸಾಲ ನೀಡುವ ಸಂಸ್ಥೆಗಳು ಇ.ಸಿ.ಎಲ್.ಜಿ.ಎಸ್. ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಿದ ಮಾಹಿತಿಯ ಪ್ರಕಾರ, ಈ ಯೋಜನೆಯಡಿ ಈವರೆಗೆ 60.67 ಲಕ್ಷ ಸಾಲಗಾರರಿಗೆ 2.03 ಲಕ್ಷ ಕೋಟಿ ರೂ.ಮಂಜೂರು ಮಾಡಲಾಗಿದ್ದು, 1.48 ಲಕ್ಷ ಕೋಟಿ ರೂ. ವಿತರಿಸಲಾಗಿರುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.