ನವದೆಹಲಿ: ಇಸ್ರೇಲಿ ತಂತ್ರಜ್ಞಾನಗಳ ಸಹಾಯದಿಂದ ಕೃಷಿ ಚಟುವಟಿಕೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ಸೋಮವಾರ ಇಂಡೋ-ಇಸ್ರೇಲಿ ಸೆಂಟರ್ ಫಾರ್ ಎಕ್ಸಲೆನ್ಸ್ ಫಾರ್ ವೆಜಿಟೇಬಲ್ಸ್ ಪ್ರೊಟೆಕ್ಟೆಡ್ ಕಲ್ಟಿವೇಶನ್ಗೆ ಅಡಿಪಾಯ ಹಾಕಿದರು.
ಭಾರತದ ಇಸ್ರೇಲಿ ರಾಯಭಾರಿ ರಾನ್ ಮಲ್ಕಾ ಅವರ ಸಮ್ಮುಖದಲ್ಲಿ ಗುವಾಹಟಿ ನಗರದ ಹೊರವಲಯದಲ್ಲಿರುವ ಖೇಟ್ರಿಯಲ್ಲಿ 10.33 ಕೋಟಿ ರೂ.ವೆಚ್ಚದಲ್ಲಿ ಈ ಸೆಂಟರ್ ನಿರ್ಮಾಣವಾಗಲಿದೆ.
ಅಸ್ಸಾಂನಲ್ಲಿನ ಕೃಷಿ ಮತ್ತು ತೋಟಗಾರಿಕಾ ಉತ್ಪಾದನೆಗೆ ಕೇಂದ್ರವು ಪ್ರಮುಖ ಉತ್ತೇಜನವನ್ನು ನೀಡುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ ಮುಖ್ಯಮಂತ್ರಿ, ತಂತ್ರಜ್ಞಾನವು ಕೃಷಿ, ಕೃಷಿ ವ್ಯವಹಾರ ಮತ್ತು ಆಹಾರ ಸಂಸ್ಕರಣೆ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಲಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಳೆದ ಆರು ವರ್ಷಗಳಲ್ಲಿ ಈಶಾನ್ಯದಲ್ಲಿ ನಡೆದ ಬೆಳವಣಿಗೆಯ ಬಗ್ಗೆ ಉಲ್ಲೇಖಿಸಿದ ಸೋನಾವಾಲ್, ವಾಯು, ರಸ್ತೆ ಮತ್ತು ನದಿ ಸಂಪರ್ಕದಲ್ಲಿ ಗಣನೀಯ ಸುಧಾರಣೆಯ ಮೂಲಕ ಈ ಪ್ರದೇಶವನ್ನು ದೇಶದ ಬೆಳವಣಿಗೆಯ ನಿರೂಪಣೆಯ ಮಧ್ಯಕ್ಕೆ ಕೊಂಡೊಯ್ಯಲಾಗಿದೆ ಎಂದು ಹೇಳಿದರು. ಇದು ಆಗ್ನೇಯ ಏಷ್ಯಾ ಮತ್ತು ಆಸಿಯಾನ್ನ ಹೆಬ್ಬಾಗಿಲು ಆಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.