ಮೈಸೂರು: ಯಾವುದೇ ಭಾಷೆ ಉಳಿದು, ಬೆಳೆಯಬೇಕಾದರೆ ಅದಕ್ಕೆ ನೆನಪು ಮತ್ತು ಕನಸು ಇರಬೇಕು. ಹೇಗಿತ್ತು ಎಂಬ ನೆನಪು ಮತ್ತು ಹೇಗೆ ಬೆಳೆಯಬೇಕು ಎಂಬ ಕನಸಿದ್ದಲ್ಲಿ ಮಾತ್ರ ಭಾಷೆ ಅಜರಾಮರವಾಗುತ್ತದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ಅವರು ಭಾರತೀಯ ಭಾಷಾ ಸಂಸ್ಥಾನ ಹಾಗೂ ರಾಷ್ಟ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿಯಿಂದ ವರ್ಚುವಲ್ ಮೂಲಕ ಆಯೋಜನೆ ಮಾಡಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಹಿರಿಯರು ಕನ್ನಡವನ್ನು ಉಳಿಸಿ ನಮಗೆ ದಾಟಿಸಿದ್ದಾರೆ. ನಾವು ಅದನ್ನು ಬೆಳೆಸಿ ನಮ್ಮ ಮುಂದಿನ ತಲೆಮಾರಿಗೆ ದಾಟಿಸುವ ಪ್ರಯತ್ನ ಮಾಡಬೇಕಾಗಿದೆ. ಸದ್ಯ ಉದ್ಯೋಗದ ಭಾಷೆ ಇಂಗ್ಲಿಷ್ ಎಂಬ ಭ್ರಮೆ ಸಮಾಜದಲ್ಲಿ ಇದೆ. ಇದಕ್ಕೆ ಕಾರಣ ಇಂಗ್ಲಿಷ್ ಪ್ರಭಾವ. ಈ ಪ್ರಭಾವದಿಂದ ಹೊರ ಬಂದರಷ್ಟೇ ಕನ್ನಡದ ಅಸ್ಮಿತೆಯ ಅರಿವಾಗಲು ಸಾಧ್ಯ ಎಂದು ಕಂಬಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸದ್ಯ ನೂತನ ಶಿಕ್ಷಣ ನೀತಿ ಬಂದಿದೆ. ಇನ್ನಾದರೂ ಭಾಷಾ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು. ವಿದ್ಯಾರ್ಥಿಗಳಲ್ಲಿ ಭಾಷಾ ಕಲಿಕೆಯ, ಬೆಳವಣಿಗೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಬೇಕು. ಕನ್ನಡದ ಸ್ವತಂತ್ರ ಅಸ್ಥಿತ್ವ ಕಂಡುಕೊಳ್ಳುವತ್ತ ಕನ್ನಡಿಗರು ಇನ್ನಾದರೂ ತೆರೆದುಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.