ರಾಯ್ಪುರ: ದೇಶದಲ್ಲಿ ನಕ್ಸಲರ ಅಸ್ತಿತ್ವ ನಿಧಾನಕ್ಕೆ ಕುಸಿಯುತ್ತಿದ್ದು, ಕೆಲವು ನಕ್ಸಲರು ಪೊಲೀಸರಿಗೆ ಶರಣಾದರೆ, ಕೆಲವರು ಪೊಲೀಸರ ಗುಂಡೇಟಿಗೆ ಬಲಿಯಾಗುತ್ತಿದ್ದಾರೆ. ಛತ್ತೀಸ್ಗಢದ ದಂತೇವಾಡ ಜಿಲ್ಲೆಯ ಬುಡಕಟ್ಟು ಬಸ್ತರ್ ವಿಭಾಗದಲ್ಲಿ 27 ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ.
ಈ 27 ಮಂದಿಯ ಪೈಕಿ ಐದು ಬಂಡುಕೋರರ ತಲೆ ಮೇಲೆ ಬಹುಮಾನವನ್ನು ಘೋಷಣೆ ಮಾಡಲಾಗಿತ್ತು. ಬಾರ್ಸೂರ್ ಪೊಲೀಸ್ ಠಾಣೆಯಲ್ಲಿ ನಿನ್ನೆ ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳ ಮುಂದೆ ಇವರುಗಳು ಶರಣಾಗಿದ್ದಾರೆ.
ಶರಣಾದ ನಕ್ಸಲರು ಜಿಲ್ಲೆಯಲ್ಲಿ ಪೊಲೀಸರು ನಡೆಸುತ್ತಿರುವ ‘ಲೋನ್ ವರ್ರತು’ ಅಭಿಯಾನದಿಂದ ಪ್ರೇರಿತರಾಗಿ ಶರಣಾಗಿದ್ದಾರೆ. ‘ಲೋನ್ ವರ್ರತು’ ಎಂದರೆ ಸ್ಥಳೀಯ ಬುಡಕಟ್ಟು ಉಪಭಾಷೆಯಾದ ಗೊಂಡಿಯಲ್ಲಿ ‘ಮನೆಗೆ ಮರಳಿ’ ಎಂಬುದಾಗಿದೆ. ಇಲ್ಲಿಯವರೆಗೆ 170 ಕ್ಕೂ ಹೆಚ್ಚು ಮಾವೋವಾದಿಗಳು ‘ಲೋನ್ ವರ್ರತು’ ಅಭಿಯಾನದಡಿ ಶರಣಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.