ಕೋಲ್ಕತ್ತಾ: ಇಲ್ಲಿನ ಎಸ್ಪ್ಲಾನಡೆ ಪ್ರದೇಶದಲ್ಲಿ ದೇಶದ ಪ್ರಪ್ರಥಮ ಟೈರ್ ಪಾರ್ಕ್ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.
ಹಳೆಯ, ನಿರುಪಯುಕ್ತ ವಸ್ತು, ತ್ಯಾಜ್ಯಗಳನ್ನು ಬಳಸಿ ಕಣ್ಮನ ಸೆಳೆಯುವ ಕಲಾಕೃತಿಗಳನ್ನು ತಯಾರಿಸಲಾದ ವಸ್ತುಗಳನ್ನು ಈ ಉದ್ಯಾನದಲ್ಲಿ ನಾವು ಕಾಣಬಹುದಾಗಿದೆ. ‘ತ್ಯಾಜ್ಯದಿಂದ ಕಲೆ’ ಎಂಬ ಪರಿಕಲ್ಪನೆಯಡಿಯಲ್ಲಿ ಈ ಉದ್ಯಾನ ನಿರ್ಮಾಣವಾಗಲಿದೆ.
ಈ ಸಂಬಂಧ ಮಾತನಾಡಿರುವ WBTC ವ್ಯವಸ್ಥಾಪಕ ನಿರ್ದೇಶಕ ರಾಜನ್ವೀರ್ ಕಪೂರ್, ನಮ್ಮಲ್ಲಿ ನಿರುಪಯುಕ್ತ ಎಂದು ಎಸೆಯುವ ಅನೇಕ ತ್ಯಾಜ್ಯ ವಸ್ತುಗಳಿಂದ ಸುಂದರವಾದ ಇನ್ನೇನೋ ನಿರ್ಮಾಣವಾಗಲು ಸಾಧ್ಯವಿದೆ. ನಿರುಪಯುಕ್ತ ವಸ್ತುಗಳಲ್ಲಿಯೂ ಕಲೆ ಅರಳುವುದಕ್ಕೆ ಸಾಧ್ಯವಿದ್ದು, ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಸಾರಿಗೆ ಸಂಸ್ಥೆ ತ್ಯಾಜ್ಯ, ಟೈರ್ಗಳನ್ನು ಬಳಸಿ ಈ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದೆ ಎಂದು ತಿಳಿಸಿದ್ದಾರೆ.
ಈ ಪಾರ್ಕ್ನಲ್ಲಿ ಸಂಸ್ಥೆಯ ಸಿಬ್ಬಂದಿಗಳೇ ನಿರ್ಮಿಸಿದ ಕಲಾತ್ಮಕ ವಸ್ತುಗಳನ್ನು ಸಿಂಗರಿಸಲಾಗುತ್ತದೆ. ಜೊತೆಗೆ ಒಂದು ಕೆಫೆಯೂ ಇದ್ದು, ಸಾರ್ವಜನಿಕರಿಗೆ ಇಲ್ಲಿನ ಕಲೆಯನ್ನು ಕುಳಿತು ಆಸ್ವಾದಿಸಲು ಅವಕಾಶ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಪಾರ್ಕ್ ಉದ್ಘಾಟನಾ ದಿನಾಂಕವನ್ನು ಸಹ ಪ್ರಕಟ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.