ನವದೆಹಲಿ: ಪುಲ್ವಾಮ ಭಯೋತ್ಪಾದನಾ ದಾಳಿಯ ಹಿಂದೆ ಪಾಕಿಸ್ಥಾನದ ಕೈವಾಡ ಇದೆ ಎಂಬುದು ಈಗ ಬಹಿರಂಗವಾಗಿದೆ. ಸ್ವತಃ ಪಾಕಿಸ್ಥಾನದ ಸಚಿವರು ಇದನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು, “ಘಟನೆಯ ಹಿಂದೆ ಬಿಜೆಪಿ ಕುತಂತ್ರವಿದೆ ಎಂದು ಆರೋಪಿಸಿದ ಕಾಂಗ್ರೆಸ್ ಪಕ್ಷ ತಕ್ಷಣ ದೇಶದ ಕ್ಷಮೆಯಾಚನೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
“ಪಾಕಿಸ್ಥಾನ ಪುಲ್ವಾಮ ದಾಳಿಯ ಹಿಂದೆ ತನ್ನ ಕೈವಾಡ ಇರುವುದನ್ನು ಒಪ್ಪಿಕೊಂಡಿದೆ. ಘಟನೆಯ ಹಿಂದೆ ಷಡ್ಯಂತ್ರ ಇದೆ ಎಂದಿದ್ದ ಕಾಂಗ್ರೆಸ್ ಮತ್ತು ಇತರರು ತಕ್ಷಣ ಕ್ಷಮೆಯಾಚನೆ ಮಾಡಬೇಕು” ಎಂದು ಜಾವ್ಡೇಕರ್ ಹೇಳಿದ್ದಾರೆ.
ಪುಲ್ವಾಮ ದಾಳಿಯ ಬಳಿಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಬಿಜೆಪಿಯನ್ನು ಘಟನೆಗೆ ಹೊಣೆ ಎಂದಿದ್ದರು, ಭದ್ರತೆಯ ಲೋಪವಾಗಿದೆ ಎಂದಿದ್ದರು. ಮಾತ್ರವಲ್ಲದೇ, “ಘಟನೆಯಿಂದ ಯಾರಿಗೆ ಹೆಚ್ಚು ಲಾಭವಾಗಿದೆ?” ಎಂದು ಪ್ರಶ್ನಿಸಿದ್ದರು.
ಮಾತ್ರವಲ್ಲದೇ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್, ನರೇಂದ್ರ ಮೋದಿ ಮತ್ತು ಪಾಕಿಸ್ಥಾನಕ್ಕೂ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
“ಕಾಂಗ್ರೆಸ್ಗೆ ಏನಾಗಿದೆ? ಜನರ ಭಾವನೆಗೆ ವಿರುದ್ಧವಾದುದನ್ನು ಅವರು ಮಾತನಾಡುತ್ತಾರೆ. ಶಸ್ತ್ರಾಸ್ತ್ರ ಪಡೆಗಳ ಮೇಲೆ ಅವಿಶ್ವಾಸವನ್ನಿಡುವ ಘಟನೆ ಯಾವ ದೇಶದಲ್ಲೂ ನಡೆಯುವುದಿಲ್ಲ” ಎಂದು ಜಾವೇಡ್ಕರ್ ಹೇಳಿದ್ದಾರೆ.
Pakistan has admitted its hand behind Pulwama terror attack. Now, Congress and others who talked of conspiracy theories must apologise to the country.
— Prakash Javadekar (@PrakashJavdekar) October 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.