ಸಿಂಧನೂರು: ರಾಯಚೂರು ಜಿಲ್ಲೆಯ ಸಿಂಧನೂರಿನ ಗುಂಜಳ್ಳಿ ಕ್ಯಾಂಪ್ನ ಎಂಡಿಎನ್ ಶಾಲೆಯ ಪುಟಾಣಿ ಪ್ರತಿಭೆ ಪುಣ್ಯಶ್ರಿತಾ ಚಿಲಕೂರಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾರೆ.
ತಮ್ಮ ಅಗಾಧ ನೆನಪಿನ ಶಕ್ತಿಯ ಮೂಲಕವೇ ಪುಣ್ಯಶ್ರಿತಾ ಈ ದಾಖಲೆ ಬರೆದಿದ್ದಾರೆ. ಇವರು ಬಸವಣ್ಣನ ವಚನಗಳ ವಿಶ್ಲೇಷಣೆ, ಭಗವದ್ಗೀತೆ, ರಾಮಾಯಣ ಗ್ರಂಥಗಳನ್ನು ತಮ್ಮ ನೆನಪಿನ ಶಕ್ತಿಯ ಮೂಲಕ ಪಟಪಟನೆ ಹೇಳುತ್ತಾರೆ. ಜೊತೆಗೆ ಐವತ್ತಾರು ಶ್ಲೋಕಗಳನ್ನು ಕೇವಲ ಏಳು ನಿಮಿಷಗಳಲ್ಲಿಯೇ ಹೇಳಿ ಮುಗಿಸುವ ಈಕೆಯ ಪ್ರತಿಭೆಗೆ ಬೆರಗಾಗದವರೇ ಇಲ್ಲ.
ಹಾಗೆಯೇ ಪುಣ್ಯಶ್ರಿತಾ ನಾಟ್ಯ ಪ್ರಕಾರಗಳಾದ ಭರತನಾಟ್ಯ, ಹಿಂದೂಸ್ಥಾನಿ ಸಂಗೀತ, ಸಾಮಾನ್ಯ ಜ್ಞಾನ, ಭಾಷಣ, ಪಾಶ್ಚಾತ್ಯ ನೃತ್ಯ, ಸಂಸ್ಕೃತ ಶ್ಲೋಕ, ಸಣ್ಣ ಕಥೆಗಳನ್ನು ಹೇಳುವುದರಲ್ಲಿಯೂ ನಿಪುಣೆ. ಈಕೆಯ ಅದ್ಭುತ ಪ್ರತಿಭೆಗೆ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣ ಪತ್ರ ಮತ್ತು ಪದಕಗಳನ್ನು ನೀಡಿ ಗೌರವಿಸಿದೆ.
ಈ ಸಂಬಂಧ ಸಂತಸ ಹಂಚಿಕೊಂಡಿರುವ ಪುಣ್ಯಶ್ರಿತಾ ಹೆತ್ತವರು, ಮಗಳು ಆಕೆಯ ಸಾಧನೆಯ ಮೂಲಕವೇ ಕರ್ನಾಟಕದ ಜನತೆಗೆ ನಮ್ಮನ್ನು ಪರಿಚಯಿಸಿದ್ದಾಳೆ. ಅವಳ ನೆನಪಿನ ಶಕ್ತಿಯೇ ಅವಳನ್ನು ಈ ದಾಖಲೆ ಮಾಡುವಂತೆ ಮಾಡಿದೆ. ಮಗಳು ಭವಿಷ್ಯದಲ್ಲಿ ಐಎಎಸ್ ಮಾಡುವ ಗುರಿ ಹೊಂದಿದ್ದಾಳೆ. ಆಕೆಗೆ ಸದಾ ಕಾಲ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.