ತಿರುವನಂತಪುರ: ಕೇರಳದ ಪ್ರಸಿದ್ಧ ಧಾರ್ಮಿಕ ಕೇಂದ್ರ ಶಬರಿಮಲೆ ದೇವಾಲಯವನ್ನು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸುವ ಸಂಬಂಧ ತಜ್ಞರ ತಂಡ ಸರ್ಕಾರಕ್ಕೆ ವರದಿ ನೀಡಿದೆ.
ಈ ವರದಿಯಲ್ಲಿ ದೇವಾಲಯಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ 1000 ಜನರಿಗೆ ಪ್ರವೇಶಕ್ಕೆ ಅವಕಾಶ ಮತ್ತು ಶನಿವಾರ ಮತ್ತು ಭಾನುವಾರಗಳಂದು 2000 ಜನರಿಗೆ ದೇಗುಲ ದರ್ಶನಕ್ಕೆ ಅನುಮತಿ ನೀಡಬಹುದಾಗಿದೆ ಎಂದು ತಿಳಿಸಲಾಗಿದೆ. ಜೊತೆಗೆ ದೇಗುಲಕ್ಕೆ ಆಗಮಿಸುವ 60 ವರ್ಷ ಮೇಲ್ಪಟ್ಟ ಭಕ್ತರು ತಾವು ಯಾವುದೇ ರೀತಿಯ ಗಂಭೀರವಾದ ಖಾಯಿಲೆಗಳಿಂದ ಬಳಲುತ್ತಿಲ್ಲ ಎಂಬುದಕ್ಕೆ ವೈದ್ಯರ ವರದಿ ತರುವಂತೆಯೂ ಸಲಹೆ ನೀಡಿದೆ.
ಜೊತೆಗೆ ಕೋವಿಡ್ ಜಾಗೃತಾ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿದವರಿಗೆ ಮಾತ್ರ ಅವಕಾಶ. ಹಾಗೆಯೇ ದೇಗುಲ ದರ್ಶನಕ್ಕೂ 48 ಗಂಟೆಗಳ ಮೊದಲೇ ಕೊರೋನಾ ಟೆಸ್ಟ್ ಮಾಡಿಸಿದ್ದು ನೆಗೆಟಿವ್ ವರದಿಯನ್ನು ಈ ಪೋರ್ಟಲ್ಗೆ ಅಪ್ಲೋಡ್ ಮಾಡುವಂತೆಯೂ ಸೂಚಿಸಲಾಗಿದೆ. ಎಲ್ಲಾ ದಾಖಲೆಗಳ ಜೊತೆಗೆ ನೀಲಕಲ್ ಎಂಟ್ರಿ ಪಾಯಿಂಟ್ಗೆ ಆಗಮಿಸುವ ಭಕ್ತರನ್ನು ಆಂಟಿಜೆನ್ ಟೆಸ್ಟ್ಗೆ ಒಳಪಡಿಸಲು ಸೂಚಿಸಲಾಗಿದೆ. ಈ ವೆಚ್ಚವನ್ನು ಭಕ್ತರೇ ಭರಿಸಬೇಕಿದೆ. ಕೊರೋನಾ ನೆಗೆಟಿವ್ ವರದಿ ಇದ್ದರಷ್ಟೇ ದೇಗುಲಕ್ಕೆ ಹೋಗಲು ಅವಕಾಶ ನೀಡಲಾಗುತ್ತದೆ ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.