ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ 2020ರಲ್ಲಿ ಲೋಕಸಭೆಯ ಕಲಾಪ ಅಂದಾಜು ಶೇ.167ರಷ್ಟು ಮತ್ತು ರಾಜ್ಯಸಭೆಯ ಕಲಾಪ ಅಂದಾಜು ಶೇ.100.47ರಷ್ಟು ಫಲಪ್ರದವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ.
ಸೆಪ್ಟೆಂಬರ್ 14ರಂದು ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನ ಅಕ್ಟೋಬರ್ 1 ರಂದು ಮುಕ್ತಾಯಗೊಳ್ಳಬೇಕಾಗಿತ್ತು, ಆದರೆ ಕೋವಿಡ್-19 ಸಾಂಕ್ರಾಮಿಕದ ಭೀತಿ ಹಿನ್ನೆಲೆಯಲ್ಲಿ ಅಗತ್ಯ ಕಲಾಪಗಳನ್ನು ಪೂರ್ಣಗೊಳಿಸಿದ ನಂತರ ಬುಧವಾರ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಸೆಪ್ಟೆಂಬರ್ 23ರ ವರೆಗೆ ಹತ್ತು ದಿನಗಳ ಕಾಲ ಎರಡೂ ಸದನಗಳ ಅಧಿವೇಶನದ ಕಲಾಪ ನಡೆದಿದೆ ಎಂದು ಜೋಶಿ ಹೇಳಿದ್ದಾರೆ.
ಈ ಅವಧಿಯಲ್ಲಿ 22 ಮಸೂದೆಗಳನ್ನು(ಲೋಕಸಭೆಯಲ್ಲಿ 16, ರಾಜ್ಯಸಭೆಯಲ್ಲಿ 6) ಮಂಡಿಸಲಾಯಿತು. ಲೋಕಸಭೆ ಮತ್ತು ರಾಜ್ಯಸಭೆ ಪ್ರತ್ಯೇಕವಾಗಿ ತಲಾ 25 ಮಸೂದೆಗಳಿಗೆ ಅನುಮೋದನೆ ನೀಡಿವೆ. ಒಟ್ಟು ಸಂಸತ್ತಿನ ಎರಡೂ ಸದನಗಳು 27 ಮಸೂದೆಗಳನ್ನು ಅಂಗೀಕರಿಸಿದ್ದು, ಅದು ಪ್ರತಿ ದಿನದ ಸರಾಸರಿಯಲ್ಲಿ ಅತಿ ಹೆಚ್ಚಿನ ಪ್ರಮಾಣದ ಅನುಮೋದನೆ ಅಂದರೆ ದಿನಕ್ಕೆ 2.7 ಮಸೂದೆಗಳ ಅನುಮೋದನೆ ದೊರೆತಂತಾಗಿದೆ. ಈ ಅಧಿವೇಶನದಲ್ಲಿ ಮಂಡಿಸಲಾದ, ಪರ್ಯಾಲೋಚಿಸಲ್ಪಟ್ಟ ಮತ್ತು ಅನುಮೋದನೆ ನೀಡಿದ ಮಸೂದೆಗಳ ಶೀರ್ಷಿಕೆಗಳು ಹಾಗೂ ವಿವರಗಳನ್ನು ಅಡಕದಲ್ಲಿ ಲಗತ್ತಿಸಲಾಗಿದೆ ಎಂದಿದ್ದಾರೆ.
11 ಸುಗ್ರೀವಾಜ್ಞೆಗಳ ಕುರಿತು ಉಲ್ಲೇಖಿಸಿದ ಅವರು, 2020ರ ಮುಂಗಾರು ಅಧಿವೇಶನದ ವೇಳೆ ಕಳೆದ ಅಧಿವೇಶನದ ನಂತರ ಹೊರಡಿಸಲಾಗಿದ್ದ 11 ಸುಗ್ರೀವಾಜ್ಞೆಗಳ ಬದಲಿಗೆ ಹೊಸ ಮಸೂದೆಗಳನ್ನು ಮಂಡಿಸಲಾಗಿದೆ. ಲೋಕಸಭೆಯಲ್ಲಿ ಬಾಕಿ ಇದ್ದ ನಾಲ್ಕು ಹಳೆಯ ಮಸೂದೆ ಮತ್ತು ರಾಜ್ಯಸಭೆಯಲ್ಲಿ ಬಾಕಿ ಇದ್ದ ಒಂದು ಮಸೂದೆಯನ್ನು ವಾಪಸ್ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.