ನವದೆಹಲಿ: ಇಂದು ಶಿಕ್ಷಕರ ದಿನಾಚರಣೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಕರ ಕೊಡುಗೆಯನ್ನು ಶ್ಲಾಘಿಸಿದ್ದಾರೆ ಮತ್ತು ಅವರ ಕಠಿಣ ಪರಿಶ್ರಮಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, “ಮನಸ್ಸನ್ನು ರೂಪಿಸಲು ಮತ್ತು ನಮ್ಮ ರಾಷ್ಟ್ರವನ್ನು ನಿರ್ಮಿಸಲು ಕೊಡುಗೆ ನೀಡುವ ಪರಿಶ್ರಮಿ ಶಿಕ್ಷಕರಿಗೆ ನಾವು ಕೃತಜ್ಞರಾಗಿದ್ದೇವೆ. ಶಿಕ್ಷಕರ ದಿನದಂದು, ನಮ್ಮ ಶಿಕ್ಷಕರ ಗಮನಾರ್ಹ ಪ್ರಯತ್ನಗಳಿಗಾಗಿ ನಾವು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಡಾ. ಎಸ್. ರಾಧಾಕೃಷ್ಣನ್ ಅವರ ಜಯಂತಿಯ ಸಂದರ್ಭದಲ್ಲಿ ಅವರಿಗೆ ಗೌರವ ” ಎಂದಿದ್ದಾರೆ.
ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಶಿಕ್ಷಕರ ದಿನದಂದು ಶುಭಾಶಯ ಕೋರಿದ್ದಾರೆ.
“ಅಪ್ರತಿಮ ಚಿಂತಕ ಮತ್ತು ಪ್ರಬುದ್ಧ ವಿದ್ವಾಂಸ, ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯಂದು ಅವರಿಗೆ ಗೌರವ. ಶಿಕ್ಷಕರ ದಿನದಂದು, ಲಕ್ಷಾಂತರ ಜನರಿಗೆ ನಿಸ್ವಾರ್ಥವಾಗಿ ಮಾರ್ಗದರ್ಶನ ನೀಡುವ ಮೂಲಕ ರಾಷ್ಟ್ರವನ್ನು ರೂಪಿಸುವಲ್ಲಿ ಸಾಟಿಯಿಲ್ಲದ ಪಾತ್ರವನ್ನು ವಹಿಸುತ್ತಿರುವ ಇಡೀ ಬೋಧಕ ವರ್ಗಕ್ಕೆ ಶುಭಾಶಯಗಳು” ಎಂದಿದ್ದಾರೆ.
“ಶಿಕ್ಷಕರ ದಿನದಂದು ಎಲ್ಲಾ ದೇಶವಾಸಿಗಳನ್ನು ನಾನು ಶುಭ ಬಯಸುತ್ತೇನೆ ಮತ್ತು ಎಲ್ಲಾ ಗುರುಗಳಿಗೆ ನಮಸ್ಕರಿಸುತ್ತೇನೆ. ಶಿಕ್ಷಕರ ದಿನದಂದು ನಮ್ಮ ಶಿಕ್ಷಕರು, ಸಲಹೆಗಾರರು ಮತ್ತು ಪೋಷಕರಿಗೆ ಧನ್ಯವಾದ ಹೇಳೋಣ, ಅವರ ಆಶೀರ್ವಾದದೊಂದಿಗೆ ನಾವು ಬಹಳಷ್ಟು ಕಲಿತಿದ್ದೇವೆ” ಎಂದಿದ್ದಾರೆ.
ಸೆಪ್ಟೆಂಬರ್ 5, 1888 ರಂದು ಜನಿಸಿದ ತತ್ವಜ್ಞಾನಿ-ಲೇಖಕ ಮತ್ತು ಭಾರತದ ಎರಡನೇ ರಾಷ್ಟ್ರಪತಿ ಅಧ್ಯಕ್ಷ ಡಾ.ಎಸ್. ರಾಧಾಕೃಷ್ಣನ್ ಅವರ ನೆನಪಿಗಾಗಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳು ಅನುಕರಣೀಯವಾಗಿವೆ.
We remain grateful to the hardworking teachers for their contributions towards shaping minds and building our nation. On Teachers Day, we express gratitude to our teachers for their remarkable efforts. We pay tributes to Dr. S. Radhakrishnan on his Jayanti. #OurTeachersOurHeroes
— Narendra Modi (@narendramodi) September 5, 2020
Tributes to an iconic thinker and erudite scholar, former President Dr. Sarvepalli Radhakrishnan on his Jayanti.
On #TeachersDay, Greetings to the entire teaching fraternity who has been playing an unparalleled role in shaping the nation by selflessly guiding millions of souls. pic.twitter.com/yPIEkT96dQ
— Amit Shah (@AmitShah) September 5, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.