ಮೈಸೂರು: ಕೊರೋನಾ ಕಾರಣದಿಂದಾಗಿ ಈ ಬಾರಿಯ ಎಲ್ಲಾ ಹಬ್ಬಗಳೂ ಸರಳವಾಗಿಯೇ ಆಚರಿಸುವಂತಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವ ವಿಖ್ಯಾತ ನಾಡಹಬ್ಬ ದಸರಾವೂ ಬರಲಿದ್ದು, ಕೊರೋನಾ ಸಂಕಷ್ಟದ ಜೊತೆ ಜೊತೆಯಲ್ಲೇ ನವರಾತ್ರಿಯನ್ನು ನಡೆಸಬೇಕಾಗಿರುವ ಅನಿವಾರ್ಯತೆಯೂ ಎದುರಾಗಿದೆ. ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನರನ್ನೂ ತನ್ನತ್ತ ಆಕರ್ಷಿಸುವ ಜಂಬೂ ಸವಾರಿಯೂ ಈ ಬಾರಿ ನಡೆಯುವ ಸಾಧ್ಯತೆ ಕಡಿಮೆ ಇದೆ ಎಂದು ಸಂಬಂಧಪಟ್ಟ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೇವಲ ಕೊರೋನಾ ಸಂಕಷ್ಟ ಮಾತ್ರವಲ್ಲದೆ ಈ ಬಾರಿಯ ಪ್ರವಾಹದ ಕಾರಣದಿಂದಲೂ ಮೈಸೂರು ದಸರಾ ಸರಳವಾಗಿ ಆಚರಿಸುವ ಸಾಧ್ಯತೆ ಇದೆ ಎಂದು ಐಎಫ್ಎಸ್ ಅಧಿಕಾರಿಯೊಬ್ಬರು ದಸರಾ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ. ಜಂಬೂ ಸವಾರಿಗೆ ಬಳಕೆ ಮಾಡಲು ಆನೆಗಳನ್ನು ಮೈಸೂರಿಗೆ ಕರೆದೂಕೊಂಡು ಬಂದು ತರಬೇತಿ ನೀಡುವ ಸಂಬಂಧ ಯಾವುದೇ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿಲ್ಲ ಎಂದೂ ಅವರು ಹೇಳಿದ್ದಾರೆ.
ವರ್ಷಂಪ್ರತಿ ಈ ಸಂಬಂಧ ಮೈಸೂರು ಡಿಸಿ ಆನೆಗಳನ್ನು ಕರೆತರುವುದರ ಕುರಿತಂತೆ ಅರಣ್ಯ ಇಲಾಖೆಗೆ ಪತ್ರ ಬರೆಯುತ್ತಾರೆ. ಆದರೆ ಈ ವರ್ಷದಲ್ಲಿ ಈ ವರೆಗೂ ದಸರಾ ಆನೆಗಳಿಗೆ ಸಂಬಂಧಿಸಿದಂತೆ ಯಾವುದೇ ವ್ಯವಹಾರಗಳೂ ನಡೆಯದೇ ಇದ್ದು, ಇದರಿಂದಾಗಿ ಈ ಬಾರಿ ಚಿನ್ನದ ಅಂಬಾರಿ ಹೊತ್ತ ಜಂಬೂ ಸವಾರಿ ಸೇರಿದಂತೆ ಇನ್ನಿತರ ಹೆಚ್ಚು ಜನಸಂದಣಿ ಸೇರುವ ಕಾರ್ಯಕ್ರಮಗಳು ನಡೆಯುವ ಬಗ್ಗೆ ಈ ವರೆಗೆ ಯಾವುದೇ ಸೂಚನೆಗಳು ಸಿಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೆ ಈ ಬಾರಿಯ ದಸರಾ ಆಚರಣೆಗಳು ಕೇವಲ ಮೈಸೂರು ಅರಮನೆಯ ಆವರಣದಲ್ಲಿ ಮಾತ್ರವೇ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಇದೇ 21 ಕ್ಕೆ ಕೆಆರ್ಎಸ್ ನಲ್ಲಿ ಕಾವೇರಿ ನದಿಗೆ ಬಾಗಿನ ನೀಡಲು ಆಗಮಿಸುವ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿ ನೀಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.