ಬೆಂಗಳೂರು: ಹಿಂದೂ ಪರ, ರಾಷ್ಟ್ರದ ಪರ ದನಿಯನ್ನು ಅಡಗಿಸುವ ಕೆಲಸವನ್ನು ಫೇಸ್ಬುಕ್ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ದೂರುಗಳಿದ್ದರೆ ತಮಗೆ ಕಳುಹಿಸುವಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಫೇಸ್ಬುಕ್ ಬಳಕೆದಾರರಲ್ಲಿ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಚಿಂತನೆಗಳು, ಭಾರತದ ಪರ ಚಿಂತನೆಗಳು, ಹಿಂದೂ ಪರ ನಿಲುವುಗಳನ್ನು ಹತ್ತಿಕ್ಕುವ ಕೆಲಸವನ್ನು ಫೇಸ್ಬುಕ್ ಮಾಡುತ್ತಿರುವ ಬಗ್ಗೆ ಈಗಾಗಲೇ ಅನೇಕ ಜನರು ದೂರಿತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಐಟಿ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರೂ ಆಗಿರುವ ತೇಜಸ್ವಿ ಈ ವಿಚಾರವನ್ನು ಸೂಕ್ತ ವೇದಿಕೆಯಲ್ಲಿ ಚರ್ಚೆಗೆ ತರುವುದಾಗಿಯೂ ತಿಳಿಸಿದ್ದಾರೆ. ಅಲ್ಲದೆ ಯಾರಿಗಾದರೂ ಇಂತಹ ದೂರುಗಳಿದ್ದರೆ ಅವುಗಳನ್ನು ತಮಗೆ ಕಳುಹಿಸಿಕೊಡುವಂತೆಯೂ ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ತೇಜಸ್ವಿ ಸೂರ್ಯ ಅವರ ಈ ಕ್ರಮಕ್ಕೆ ಬೆಂಬಲ ಸೂಚಿಸಿರುವ ದೆಹಲಿಯ ಬಿಜೆಪಿ ನಾಯಕ ಕಪಿಲ್ ಮಿಶ್ರಾ, ಫೇಸ್ಬುಕ್ ಭಾರತದ ಪರ ಧ್ವನಿಗಳನ್ನು, ಹಿಂದೂ ಪರ ವಿಚಾರವನ್ನು ಸೆನ್ಸಾರ್ ಮಾಡುತ್ತಿದೆ. ಇದಕ್ಕೆ ಸಾವಿರಾರು ಉದಾಹರಣೆಗಳೂ ಸಿಗುತ್ತವೆ. ಆದರೆ ಇಸ್ಲಾಮಿಕ್ ಅಜೆಂಡಾಗಳನ್ನು ಬಿತ್ತರಿಸಲು ಬೆಂಬಲ ನೀಡುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ಕಳೆದ ವರ್ಷವಷ್ಟೇ ಟ್ವಿಟ್ಟರ್ನಲ್ಲಿ ಎಡಪಂಥೀಯ ವಾದದ ಬೆಂಬಲಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ಸಿಇಒ ಜಾಕ್ ಡಾರ್ಸಿ ಅವರಿಗೆ ಅನುರಾಗ್ ಠಾಕೂರ್ ಅವರ ನೇತೃತ್ವದ ಸಂಸದೀಯ ಸಮಿತಿ ಸಮನ್ಸ್ ನೀಡಿತ್ತು.
Many have complained that Facebook is unfairly censoring many nationalist, pro-India or pro-Hindu voices
As member of Standing Committee on IT, I will take it up with concerned in appropriate forum.
Please send me your complaints, if any, on the issue to contact@tejasvisurya.in
— Tejasvi Surya (@Tejasvi_Surya) August 16, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.