ಮಂಗಳೂರು: ನಮ್ಮೊಳಗಿನ ಪರಿಸರ ಪ್ರೇಮವನ್ನು ಹೇಗೆಲ್ಲಾ ಪ್ರಸ್ತುತ ಪಡಿಸಬಹುದು ಎಂಬುದಕ್ಕೆ ಮಂಗಳೂರಿನ ಕಲಾವಿದ ನಿತಿನ್ ವಾಸ್ ಅವರು ನಮ್ಮೆಲ್ಲರಿಗೂ ಉದಾಹರಣೆಯಾಗಿ ನಿಲ್ಲುತ್ತಾರೆ.
ಪರಿಸರ ಸ್ನೇಹಿ ಗಣಪ, ತ್ರಿವರ್ಣ ಬ್ಯಾಡ್ಜ್ ಮೊದಲಾದವುಗಳನ್ನು ನಿರ್ಮಿಸುವ ಮೂಲಕ ಈ ಕಲಾವಿದ ಜನರ ಗಮನ ಸೆಳೆಯುತ್ತಿದ್ದಾರೆ. ಸದ್ಯ ಇವರು ಪರಿಸರ ಸ್ನೇಹಿ ಗಣಪನ ಜೊತೆಗೆ, ಈ ಬಾರಿಯ ಸ್ವಾತಂತ್ರ್ಯ ದಿನಕ್ಕೆ ಭಾರತದ ಪತಾಕೆಯ ತ್ರಿವರ್ಣಗಳನ್ನು ಹೊಂದಿರುವ ಬ್ಯಾಡ್ಜ್ ಅನ್ನು ಸಹ ತಯಾರಿಸುವ ಮೂಲಕ ಮತ್ತೊಂದು ವಿಶೇಷತೆ ಮೆರೆದಿದ್ದಾರೆ.
ಅಯ್ಯೋ ಇದರಲ್ಲೇನು ವಿಶೇಷ ಎಂದಿರಾ?… ಈ ಬ್ಯಾಡ್ಜ್ಗಳನ್ನು ಕಾಗದಗಳಿಂದ ಆಕರ್ಷಕವಾಗಿ ತಯಾರಿಸಲಾಗಿದ್ದು, ಇದರಲ್ಲಿ ಹಣ್ಣಿನ, ತರಕಾರಿಗಳ ಬೀಜಗಳನ್ನು ಬಳಸಿದ್ದಾರೆ. ಬಳಸಿ ವಿಸರ್ಜಿಸುವ ಸಂದರ್ಭದಲ್ಲಿ ಪ್ರಕೃತಿಗೆ ಇದರಿಂದಾಗಿ ಯಾವುದೇ ರೀತಿಯಲ್ಲಿಯೂ ಹಾನಿಯಾಗಲಾರದು. ಜೊತೆಗೆ ಇದರಲ್ಲಿನ ಬೀಜಗಳು ಮಣ್ಣು ಸೇರಿ ಗಿಡ ಮರಗಳಾಗುವ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೂ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ನಿತಿನ್ ಅವರದ್ದು.
ಈ ಕಲಾಕೃತಿಗಳು, ಬ್ಯಾಡ್ಜ್ಗಳು ನೋಡುವುದಕ್ಕೂ ಕಲಾತ್ಮಕವಾಗಿದ್ದು ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ ಎಂಬುದರಲ್ಲಿಯೂ ಯಾವುದೇ ಸಂದೇಹವಿಲ್ಲ. ಹಾಗೆಯೇ ಪರಿಸರದ ಮೇಲೆಯೂ ಯಾವುದೇ ಅಡ್ಡ ಪರಿಣಾಮ ಬೀರಲಾರದು.
Karnataka: A man in Mangaluru has created environment-friendly national flag badges which grow into a plant, for this year’s #IndependenceDay celebrations.
Nitin Vas says,”They are made from paper pulp. We used passion fruit seeds which grow into plants. It’ll curb plastic use” pic.twitter.com/POeM37NjaI
— ANI (@ANI) August 14, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.