ಬೆಂಗಳೂರು: ಕೊರೋನಾ ಲಾಕ್ಡೌನ್ ನಂತರದಲ್ಲಿ ಕಳೆದ ಜುಲೈ 25 ರಿಂದ ಪ್ರಾಯೋಗಿಕವಾಗಿ ಭಾರತೀಯ ರೈಲ್ವೆ ಸರಕು ಸಾಗಾಟ ರೈಲುಗಳ ಸಂಚಾರವನ್ನು ಪುನರಾರಂಭ ಮಾಡಿದ್ದು, ನೈರುತ್ಯ ರೈಲ್ವೆಯ ಮೊದಲ ವೇಳಾಪಟ್ಟಿ ಸರಕು ರೈಲು ಆಗಸ್ಟ್ 15 ರಂದು ಬೆಂಗಳೂರಿನ ವೈಟ್ಫೀಲ್ಡ್ ಸ್ಯಾಟಲೈಟ್ ಗೂಡ್ಸ್ ಟರ್ಮಿನಲ್ನಿಂದ ಹೊರಟು ಪಶ್ಚಿಮ ಬಂಗಾಳದ ಶಾಲಿಮರ್ ಸ್ಟೇಷನ್ಗೆ ತೆರಳಲಿದೆ.
ಪ್ರತಿ ಶನಿವಾರ ಬೆಂಗಳೂರಿನಿಂದ ಹೊರಟು, ಪ.ಬಂಗಾಳದ ಶಾಲಿಮರ್ಗೆ 48 ಗಂಟೆಗಳಲ್ಲಿ ತಲುಪಲಿದೆ. ಈ ರೈಲು ಗಂಟೆಗೆ 40 ಕಿಮೀ ವೇಗದಲ್ಲಿ ಚಲಿಸಲಿದೆ ಎಂದೂ ಮೂಲಗಳು ಮಾಹಿತಿ ನೀಡಿವೆ. ಜೊತೆಗೆ ಮಂಗಳವಾರ ಮಧ್ಯಾಹ್ನ 4 ಗಂಟೆಗೆ ಮತ್ತೆ ಶಾಲಿಮರ್ನಿಂದ ಬೆಂಗಳೂರಿಗೆ ಬರಲಿದೆ.
ಈ ರೈಲುಗಳಲ್ಲಿ ಪಾರ್ಸೆಲ್ ವಿಲೇವಾರಿ ಮಾಡುವವರು 42 ವ್ಯಾಗನ್ಗಳನ್ನು ಹೊಂದಿರುವ ಈ ರೈಲಿನಲ್ಲಿ ಪ್ರತ್ಯೇಕ ವ್ಯಾಗನ್ ಬುಕ್ ಮಾಡುವುದಕ್ಕೂ ಅವಕಾಶವಿದೆ. ಒಂದು ವ್ಯಾಗ್ನಲ್ಲಿ 60 ಕೆಜಿ ಗಳಷ್ಟು ವಸ್ತುಗಳನ್ನು ಸಾಗಾಟ ಮಾಡುವ ಸಾಮರ್ಥವನ್ನು ಈ ರೈಲು ಹೊಂದಿದೆ. ರೈಲುಗಳ ಮೂಲಕ ಸರಕು ಸಾಗಾಟದ ವೆಚ್ಚವೂ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.