ಬೆಂಗಳೂರು: ಡಿಜಿ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಸ್ಥಳೀಯ ಎಸ್ಡಿಪಿಯ ನಾಯಕ ಮುಝಾಮಿಲ್ ಪಾಷಾ, ಅಜ್ನಾನ್ ಸೇರಿದಂತೆ ಇನ್ನೂ ಹಲವರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ಪೈಗಂಬರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಬರಹಗಳನ್ನು ಪ್ರಕಟಿಸಿದ ಎಂಬ ಕಾರಣವನ್ನಿಟ್ಟುಕೊಂಡು ಮುಝಾಮಿಲ್ ಪಾಷಾ ಸೇರಿದಂತೆ 15 ಮಂದಿ ರಾತ್ರಿ 8.30 ರ ವೇಳೆಗೆ ಡಿ.ಜೆ. ಹಳ್ಳಿ ಠಾಣೆಗೆ ಬಂದಿದ್ದರು. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ಪೊಲೀಸರು ನೀಡಿದ್ದರೂ, ಅದಕ್ಕೊಪ್ಪದ ಮುಖಂಡರು, ಕೂಡಲೇ ಆರೋಪಿ ನವೀನ್ನನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಪಾಷಾ, ಆತನ ಜೊತೆಗೆ ಶಿವಾಜಿ ನಗರದಲ್ಲಿ ಧಾರ್ಮಿಕ ಶಾಲೆಯೊಂದನ್ನು ನಡೆಸುತ್ತಿರುವ ಸೈಯದ್ ಅಜ್ನಾನ್ ಸೇರಿದಂತೆ ಇನ್ನೂ 15 ಜನರು ಠಾಣೆಗೆ ಬಂದಿದ್ದು, ಕೂಡಲೇ ಬಂಧಿಸಿ ಠಾಣೆಗೆ ತರುವಂತೆ ಪಟ್ಟು ಹಿಡಿದು ಕೂತಿದ್ದಾರೆ. ಆಗಲೇ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಪೊಲೀಸ್ ಠಾಣೆಯ ಎದುರು ನೂರಾರು ಜನರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಪಾಷಾ ಮತ್ತು ಅಜ್ನಾನ್ ಸೇರಿದ್ದ ಜನರ ಜೊತೆಗೆ ಪ್ರತಿಭಟನೆ, ಕಲ್ಲು ತೂರಾಟ, ಪೊಲೀಸರ ಮೇಲೆ ಹಲ್ಲೆ, ಪೊಲೀಸ್ ವಾಹನಗಳಿಗೆ ಬೆಂಕಿ ಮೊದಲಾದ ದುಷ್ಕೃತ್ಯದಲ್ಲಿ ತೊಡಗಿದ್ದಾರೆ.
ಮುಂಜಾಗ್ರತೆಯಾಗಿ ಠಾಣೆಯ ಎದುರು ಅಳವಡಿಸಲಾದ ಗೇಟ್ ಮುಚ್ಚಿದ್ದರೂ, ಅದನ್ನು ಹಾರಿ ಠಾಣೆಗೆ ನುಗ್ಗುವ ಪ್ರಯತ್ನ ಮಾಡಿರುವ ಈ ಮತಾಂಧರು ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳುವುದಕ್ಕೂ ಮುಂದಾಗಿದ್ದಾರೆ. ಠಾಣೆಯ ಕಿಟಕಿ ಗಾಜುಗಳನ್ನು ಒಡೆದಿದ್ದಾರೆ. ಈ ಎಲ್ಲಾ ಕುಕೃತ್ಯಗಳಿಗೂ ಮುಝಾಮಿಲ್ ಪಾಷಾ ಮತ್ತು ಅಜ್ನಾನ್ ಕುಮ್ಮಕ್ಕು ನೀಡಿರುವುದಕ್ಕೆ ಸಾಕ್ಷಿ ಲಭಿಸಿದ್ದು, ಸದ್ಯ ಮುಝಾಮಿಲ್ ಮತ್ತು ಅಜ್ನಾನ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಜ್ಞಾನ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತಿರುವುದಾಗಿ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.