ಬೆಂಗಳೂರು: ಕೊರೋನಾ ಕಾರಣದಿಂದಾಗಿ ಶಾಲಾರಂಭ ವಿಳಂಬವಾಗುತ್ತಿರುವುದರಿಂದಾಗಿ ವಿದ್ಯಾರ್ಥಿಗಳಿಗೆ ಹೊರೆ ತಪ್ಪಿಸಲು ಪಠ್ಯಕ್ರಮವನ್ನು ಕಡಿತ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಈ ಹಿಂದೆಯೇ ಸೂಚನೆ ನೀಡಿತ್ತು. ಈ ಸಂಬಂಧ ಏಳನೇ ತರಗತಿಯ ಪಠ್ಯದಲ್ಲಿನ ‘ಮೈಸೂರಿನ ಹುಲಿ ಟಿಪ್ಪು ಸುಲ್ತಾನ್’ ಎಂಬ ಅಧ್ಯಾಯವನ್ನು ಕೈ ಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈಗಾಗಲೇ ಹೊಸ ನೀತಿಗೆ ಅನುಗುಣವಾಗಿ ಪಠ್ಯಕ್ರಮದ ಅಧ್ಯಾಯಗಳನ್ನು ಡಿಎಸ್ಇಆರ್ಟಿ ತನ್ನ ಅಧಿಕೃತ ವೆಬ್ಸೈಟ್ ಗೂ ಅಪ್ಲೋಡ್ ಮಾಡಿದೆ. ಇದರಲ್ಲಿ 7 ನೇ ತರಗತಿಯ ಟಿಪ್ಪುವಿನ ಪಠ್ಯವನ್ನು ತೆಗೆಯಲಾಗಿದ್ದು, 66 ಮತ್ತು 10 ನೇ ತರಗತಿಗೆ ಸಂಬಂಧಿಸಿದಂತೆ ಇರುವ ಟಿಪ್ಪುವಿನ ಪಠ್ಯಗಳನ್ನು ಉಳಿಸಿಕೊಳ್ಳಲಾಗಿದೆ. ಪುನರಾವರ್ತನೆ ಬೇಡ ಎಂಬ ಉದ್ದೇಶದಿಂದ 7 ನೇ ತರಗತಿಯ ಪಠ್ಯಕ್ರಮ ದಿಂದ ಟಿಪ್ಪುವಿನ ಅಧ್ಯಾಯವನ್ನು ಕೈಬಿಡಲಾಗುತ್ತಿದೆ ಎಂದೂ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಧಿಕಾರಿಗಳು, ಪಠ್ಯಕ್ರಮ ಕಡಿತ ಎಂದರೆ, ಅರ್ಧದಷ್ಟು ಪಠ್ಯ ವಿಚಾರಗಳನ್ನು ಪುಸ್ತಕದಿಂದ ತೆಗೆದು ಹಾಕುವುದಲ್ಲ. ಬದಲಾಗಿ ಪುನರಾವರ್ತನೆ ತಡೆಯುವುದು, ಯಾವುದು ಅತ್ಯಗತ್ಯ, ಯಾವುದು ಅಷ್ಟೊಂದು ಅಗತ್ಯವಲ್ಲ ಎಂಬುದನ್ನು ಅರಿತುಕೊಂಡು ಕೆಲವು ವಿಚಾರಗಳನ್ನು ಕೈಬಿಡುವುದಾಗಿದೆ. ಪುನರಾವರ್ತನೆ ತಪ್ಪಿಸುವ ನಿಟ್ಟಿನಲ್ಲಿ ಈ ಪಠ್ಯವನ್ನು7 ನೇ ತರಗತಿಯ ಪಠ್ಯ ವಿಷಯದಿಂದ ಕೈ ಬಿಡಲಾಗಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.