ನವದೆಹಲಿ: ರಾಷ್ಟ್ರ ಕಂಡ ಮಹಾನ್ ವಿಜ್ಞಾನಿ, ಜನರ ರಾಷ್ಟ್ರಪತಿ ಎಂದೇ ಪ್ರಖ್ಯಾತರಾದ ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯನ್ನು ಇಂದು ಆಚರಿಸಲಾಗುತ್ತಿದೆ. 2015ರ ಜುಲೈ 27ರಂದು ಅವರು ಶಿಲ್ಲಾಂಗ್ನಲ್ಲಿ ಕೊನೆಯುಸಿರೆಳೆದರು.
ಇಂದು ಅವರ ಐದನೇ ಪುಣ್ಯತಿಥಿಯನ್ನು ಆಚರಿಸಲಾಗುತ್ತಿದೆ. ದೇಶಕ್ಕಾಗಿ ಅವರು ನೀಡಿದ ಅಭೂತಪೂರ್ವ ಕೊಡುಗೆಗಳನ್ನು ಇಂದು ಸ್ಮರಿಸಲಾಗುತ್ತಿದೆ. ಅವರು ಈ ದೇಶದ ಯುವಜನತೆಗೆ ನಿತ್ಯ ನಿರಂತರವಾಗಿ ಸ್ಪೂರ್ತಿಯನ್ನು ನೀಡಿದವರು. ಅವರ ದೇಹ ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಅವರು ಬಿಟ್ಟು ಹೋದ ಆದರ್ಶ, ನೀಡಿದ ಸಂದೇಶ ಎಲ್ಲವೂ ನಮಗೆ ಪ್ರೇರಣೆ.
ಕ್ಷಿಪಣಿ ಪುರುಷ ಎಂದೇ ಜನಜನಿತರಾದ ಅವರು, ಭಾರತದ ಹಲವು ಕ್ಷಿಪಣಿ ಯೋಜನೆಗಳ ಹಿಂದಿರುವ ಶಕ್ತಿಯಾಗಿದ್ದಾರೆ. ಅದರಲ್ಲೂ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಯಲ್ಲಿ ಅವರು ನೀಡಿದ ಕೊಡುಗೆ ಅಸಾಧಾರಣವಾದುದು. ಮಗುವಿನಂತಹ ಕುತೂಹಲ, ಶಿಕ್ಷಣದ ಕಡೆಗಿನ ಅವರ ಪ್ರೀತಿ, ಅವರ ಜೀವನದ ಆದರ್ಶಗಳು ಶ್ರೇಷ್ಠವಾದುದು.
ಸುಮಾರು 25 ಪುಸ್ತಕಗಳನ್ನು ಅವರು ಬರೆದಿದ್ದಾರೆ. ಅದರಲ್ಲಿ ವಿಂಗ್ಸ್ ಆಫ್ ಫೈಯರ್, ಇಗ್ನಿಟೆಡ್ ಮೈಂಡ್ಸ್, ಟರ್ನಿಂಗ್ ಪಾಯಿಂಟ್ ಮುಂತಾದವುಗಳು ಸೇರಿವೆ.
ಅವರ 5ನೇ ಪುಣ್ಯತಿಥಿಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ನಮನಗಳು ಹರಿದುಬರುತ್ತಿದೆ. ಎಲ್ಲೆಡೆಯೂ ಅವರ ನುಡಿಮುತ್ತುಗಳು ಹರಿದಾಡುತ್ತಿವೆ. ಜನರು ಅವರ ಪರಂಪರೆಗೆ ನಮನಗಳನ್ನು ಸಲ್ಲಿಸುತ್ತಿದ್ದಾರೆ.
#apjadbulkalam, #missileman ಮುಂತಾದ ಹ್ಯಾಶ್ಟ್ಯಾಗ್ಗಳು ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.