ನವದೆಹಲಿ: ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಗಮನಾರ್ಹ ಸಂಖ್ಯೆಯ ಐಸಿಸ್ ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಅನಾಲಿಸ್ಟಿಕ್ ಸಪೋರ್ಟ್ ಆಂಡ್ ಸ್ಯಾಂಕ್ಷನ್ ಮಾನಿಟರಿಂಗ್ ಟೀಮ್ ಸಿದ್ಧಪಡಿಸಿದ ವರದಿಯು ತಿಳಿಸಿದೆ.
ವಿಶ್ವಸಂಸ್ಥೆಯ ಅನಾಲಿಸ್ಟಿಕ್ ಸಪೋರ್ಟ್ ಆಂಡ್ ಸ್ಯಾಂಕ್ಷನ್ ಮಾನಿಟರಿಂಗ್ ಟೀಮ್ನ 26 ನೇ ವರದಿಯು, ಐಸಿಸ್ ಅಥವಾ ದಾಶ್ ಎಂದೂ ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ ಕಳೆದ ವರ್ಷ ಮೇ ತಿಂಗಳಲ್ಲಿ ಭಾರತದಲ್ಲಿ ʼವಿಲಾಯಾಹ್ ಆಫ್ ಹಿಂದ್ʼ ಎಂದು ಕರೆಯಲ್ಪಡುವ ಹೊಸ ಪ್ರಾಂತ್ಯವನ್ನು ಸ್ಥಾಪಿಸಿರುವುದಾಗಿ ಘೋಷಣೆ ಮಾಡಿತ್ತು ಎಂದಿದೆ.
“ಈ ಗುಂಪು ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್ ಮತ್ತು ಪಾಕಿಸ್ತಾನದಲ್ಲಿ 150 ರಿಂದ 200 ಸದಸ್ಯರನ್ನು ಹೊಂದಿದೆ ಎಂದು ವರದಿಯಾಗಿದೆ. ಪ್ರಸ್ತುತ ಎಕ್ಯೂಐಎಸ್ (ಅಲ್ಖೈದ ಅಂಗಸಂಸ್ಥೆ) ನಾಯಕ ಒಸಾಮಾ ಮಹಮೂದ್ ಈ ಪ್ರದೇಶದಲ್ಲಿ ಪ್ರತೀಕಾರದ ಕಾರ್ಯಾಚರಣೆಯನ್ನು ಯೋಜಿಸುತ್ತಿದ್ದಾನೆ. ಅದರ ಮಾಜಿ ನಾಯಕನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಿ ಎಂದು ಆತ ಕರೆ ನೀಡಿದ್ದಾರೆ “ಎಂದು ಅದು ಹೇಳಿದೆ.
ಐಸಿಸ್ನ ಈ ಭಾರತದಲ್ಲಿನ ಘಟಕವು ಒಟ್ಟು 180 ರಿಂದ 200 ಸದಸ್ಯರನ್ನು ಹೊಂದಿದೆ ಎಂದು ವರದಿ ಹೇಳಿದೆ.
ಈ ಹಿಂದೆ ಕಾಶ್ಮೀರ ಕಣಿವೆಯಲ್ಲಿ ಐಸಿಸ್ ಮಾರಕ ದಾಳಿ ನಡೆಸಿದ್ದು, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಹತ್ತಿರದ ಭೂಮಿಯನ್ನು ಒಳಗೊಳ್ಳಲು 2015 ರಲ್ಲಿ ಸ್ಥಾಪಿಸಲಾದ ಖೋರಾಸಾನ್ ಪ್ರಾಂತ್ಯದ ಶಾಖೆ ಮೂಲಕ ಈ ದಾಳಿ ಯೋಜಿಸಲಾಗಿದೆ ಎನ್ನಲಾಗಿದೆ.
ಪಾಕಿಸ್ತಾನ, ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ಭಾರತದಿಂದ ಬಂದ 150-200 ಭಯೋತ್ಪಾದಕರನ್ನು ಒಳಗೊಂಡ ಭಾರತೀಯ ಉಪಖಂಡದ (ಎಕ್ಯೂಐಎಸ್) ಅಲ್-ಖೈದಾ ಈ ಪ್ರದೇಶಗಳಲ್ಲಿ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.