ನವದೆಹಲಿ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ‘ಕುಮ್ಹಾರ್ ಸಶಕ್ತಿಕಾರನ್ ಯೋಜನಾʼ ಅಡಿಯಲ್ಲಿ ಗುಜರಾತ್ನಲ್ಲಿ ತರಬೇತಿ ಪಡೆದ ಅನೇಕ ಕುಶಲಕರ್ಮಿಗಳಿಗೆ 100 ವಿದ್ಯುತ್ ಪಾಟರ್ ಚಕ್ರಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ವಿತರಿಸಿದ್ದಾರೆ.
ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ಕಾರ್ಯಕ್ರಮದಲ್ಲಿ ಶಾ ಅವರು ತಮ್ಮ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ವಿದ್ಯುತ್ ಪಾಟರ್ ಚಕ್ರಗಳನ್ನು ವಿತರಿಸಿದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಹಿಂದುಳಿದಿರುವ ಕುಂಬಾರ ಸಮುದಾಯವನ್ನು ಸಶಕ್ತೀಕರಣಗೊಳಿಸಿ ಭಾರತವನ್ನು ‘ಆತ್ಮನಿರ್ಭರ’ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ 100 ವಿದ್ಯುತ್ ಪಾಟರ್ಗಳನ್ನು ಕೇಂದ್ರ ಗೃಹ ಸಚಿವರು ಕುಮ್ಹಾರ್ ಸಶಕ್ತಿಕಾರನ್ ಯೋಜನೆ ಅಡಿಯಲ್ಲಿ ತರಬೇತಿ ಪಡೆದ ಕುಶಲಕರ್ಮಿಗಳಿಗೆ ಹಂಚಿಕೆ ಮಾಡಿದರು ಎಂದು ವರದಿಗಳು ತಿಳಿಸಿವೆ.
ಈ ಯೋಜನೆಯನ್ನು ಶ್ಲಾಘಿಸಿದ ಶಾ, ಸಾಂಪ್ರದಾಯಿಕ ಕುಂಬಾರಿಕೆ ಕಲೆಗಳನ್ನು ಪುನರುಜ್ಜೀವನಗೊಳಿಸುವ ಜೊತೆಗೆ ಉತ್ಪಾದಕತೆಯನ್ನು ಸುಧಾರಿಸಲು ತಂತ್ರಜ್ಞಾನವನ್ನು ಸೇರಿಸುವ ಮೂಲಕ ಹಿಂದುಳಿದಿರುವ ಕುಂಬಾರ ಸಮುದಾಯವನ್ನು ಬಲಪಡಿಸುವಲ್ಲಿ ಈ ಉಪಕ್ರಮವು ಬಹಳ ದೂರ ಸಾಗಲಿದೆ ಎಂದು ಹೇಳಿದರು.
ಅವರು ಕೆವಿಐಸಿಯಿಂದ ತರಬೇತಿ ಪಡೆದ ಐದು ಕುಂಬಾರರೊಂದಿಗೆ ಸಂವಹನ ನಡೆಸಿದರು ಮತ್ತು ಅವರ ಮುಂದಿನ ಪ್ರಯತ್ನಗಳಿಗಾಗಿ ವಿದ್ಯುತ್ ಪಾಟರ್ ಚಕ್ರಗಳು ಮತ್ತು ಇತರ ಸಾಧನಗಳನ್ನು ಒದಗಿಸಿದರು.
“ನಮ್ಮ ಕುಂಬಾರರ ಜೀವನದಲ್ಲಿ ಆಗಿರುವ ಬದಲಾವಣೆಯನ್ನು ನೋಡಿ ನನಗೆ ಸಂತೋಷವಾಗಿದೆ. ಕೇಂದ್ರದಲ್ಲಿರುವ ಮೋದಿ ಸರ್ಕಾರವು ಪ್ರಜಾಪತಿ ಸಮುದಾಯದ ಉತ್ತಮ ಜೀವನೋಪಾಯಕ್ಕಾಗಿ ಯಾವಾಗಲೂ ಕಾಳಜಿ ವಹಿಸುತ್ತದೆ” ಎಂದು ಶಾ ಹೇಳಿದರು.
“ವಿದ್ಯುತ್ ಚಾಕ್ ವಿತರಣೆ ನಮ್ಮ ಪ್ರಧಾನ ಮಂತ್ರಿ ಗುಜರಾತ್ ಜನರಿಗೆ ನೀಡಿದ ಕೊಡುಗೆಯಾಗಿದೆ. ಇದು ಅವರ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಅವರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.