ನವದೆಹಲಿ: ಕರೋನವೈರಸ್ ಲಾಕ್ಡೌನ್ ಸಮಯದಲ್ಲಿ ಸಿಲುಕಿ ಹಾಕಿಕೊಂಡ ವಲಸೆ ಕಾರ್ಮಿಕರನ್ನು ತವರಿಗೆ ಕರೆದೊಯ್ಯಲು ರೈಲ್ವೆಯು ಶ್ರಮಿಕ ವಿಶೇಷ ರೈಲುಗಳನ್ನು ಓಡಿಸಿತ್ತು. ಇದಕ್ಕಾಗಿ ರೈಲ್ವೆಯು 2,142 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಆದರೆ ಇದರಿಂದ ಪಡೆದುಕೊಂಡ ಆದಾಯ ಕೇವಲ 429 ಕೋಟಿ ರೂಪಾಯಿ ಆಗಿದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.
ವರದಿಗಳ ಪ್ರಕಾರ, ಶ್ರಮಿಕ ರೈಲುಗಳಿಗೆ ಗುಜರಾತ್ ಅತೀ ಹೆಚ್ಚು ಹಣವನ್ನು ಪಾವತಿ ಮಾಡಿದೆ. 1,027 ರೈಲುಗಳಲ್ಲಿ 15 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ಗುಜರಾತ್ನಿಂದ ತಮ್ಮ ರಾಜ್ಯಗಳಿಗೆ ಹಿಂದಿರುಗಿದ್ದಾರೆ. ಇದಕ್ಕೆ ಶುಲ್ಕವಾಗಿ ಗುಜರಾತ್ ಸರ್ಕಾರವು 102 ಕೋಟಿ ರೂಪಾಯಿಗಳನ್ನು ರೈಲ್ವೆಗೆ ನೀಡಿದೆ.
ಅದರ ನಂತರ ಮಹಾರಾಷ್ಟ್ರವು 844 ರೈಲುಗಳಲ್ಲಿ 12 ಲಕ್ಷ ಕಾರ್ಮಿಕರನ್ನು ಮರಳಿ ಸಾಗಿಸಲು 85 ಕೋಟಿ ರೂಪಾಯಿಗಳನ್ನು ರೈಲ್ವೆಗೆ ಪಾವತಿಸಿದೆ. 271 ರೈಲುಗಳಲ್ಲಿ ಸುಮಾರು ನಾಲ್ಕು ಲಕ್ಷ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಸಾಗಿಸಲು ತಮಿಳುನಾಡು ರೈಲ್ವೆಗೆ 34 ಕೋಟಿ ರೂಪಾಯಿಗಳನ್ನು ಪಾವತಿಸಿದೆ.
ಸಾಮಾನ್ಯವಾಗಿ ವಲಸೆ ಕಾರ್ಮಿಕರಿಗೆ ಮೂಲ ರಾಜ್ಯಗಳೆಂದು ಪರಿಗಣಿಸಲ್ಪಟ್ಟಿರುವ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ವಲಸಿಗರನ್ನು ಸಾಗಿಸಲು ಕ್ರಮವಾಗಿ 21 ಕೋಟಿ ರೂ., 8 ಕೋಟಿ ಮತ್ತು 64 ಲಕ್ಷ ರೂಪಾಯಿಗಳನ್ನು ಪಾವತಿಸಿವೆ ಎಂದು ಅಂಕಿಅಂಶ ತೋರಿಸುತ್ತದೆ.
ಕಾರ್ಯಕರ್ತ ಅಜಯ್ ಬೋಸ್ ಸಲ್ಲಿಸಿದ ಆರ್ಟಿಐ ಅರ್ಜಿಯ ಮೂಲಕ ಈ ಮಾಹಿತಿಯನ್ನು ಪಡೆಯಲಾಗಿದೆ. ಜೂನ್ 29 ರವರೆಗೆ ರೈಲ್ವೆ 428 ಕೋಟಿ ರೂ.ಗಳನ್ನು ಗಳಿಸಿದೆ ಎಂದು ಇದು ತೋರಿಸುತ್ತದೆ. ಆದರೆ ರೈಲ್ವೆಗೆ ಆದ ಖರ್ಚು 2,142 ಕೋಟಿ ರೂಪಾಯಿ ಆಗಿದೆ.
ರೈಲ್ವೆ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ರಾಷ್ಟ್ರೀಯ ಸಾರಿಗೆ ರೈಲ್ವೆ ಕೇವಲ 15 ಪ್ರತಿಶತದಷ್ಟು ಕಾರ್ಯಾಚರಣೆಯ ವೆಚ್ಚವನ್ನು ರಾಜ್ಯಗಳಿಂದ ವಸೂಲಿ ಮಾಡಿದೆ ಮತ್ತು ಉಳಿದ 85 ಪ್ರತಿಶತವನ್ನು ಹಣವನ್ನು ಸಚಿವಾಲಯವೇ ಭರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.