ಬೆಂಗಳೂರು: ರಾಜ್ಯದಲ್ಲಿ 1947ರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಆ ಮೂಲಕ ರೈತರಿಗೆ ಮತ್ತು ಖರೀದಿದಾರರಿಗೆ ಭೂಮಿ ಮಾರುವ ಮತ್ತು ಕಒಂಡುಕೊಳ್ಳುವುದಕ್ಕೆ ಮುಕ್ತ ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರ ನೀಡಿದೆ.
ಐದು ಸದಸ್ಯರಿಗಿಂತ ಹೆಚ್ಚು ಜನರಿರುವ ಕುಟುಂಬಕ್ಕೆ 432 ಎಕರೆ ಭೂಮಿಯನ್ನು ಹೊಂದುವ ಅವಕಾಶವನ್ನು ರಾಜ್ಯ ಸರ್ಕಾರ ಈ ತಿದ್ದುಪಡಿಯ ಮೂಲಕ ನೀಡಿದೆ. ಈ ಹಿಂದೆ 20 ಯುನಿಟ್ಗಳಷ್ಟು ಭೂಮಿಯನ್ನು ಹೊಂದುವ ಅವಕಾಶವನ್ನು ಮಾತ್ರವೇ ನೀಡಲಾಗಿತ್ತು. ಜೊತೆಗೆ ಕೃಷಿ ವರ್ಗದಿಂದ ಬಂದವರ ಜೊತೆಗೆ ಕೃಷಿಕ ಹಿನ್ನೆಲೆ ಹೊಂದಿರದವರಿಗೂ ಭೂಮಿ ಖರೀದಿಗೆ ಅವಕಾಶ ನೀಡಲಾಗಿದೆ.
ಈ ಹಿಂದೆ ರೈತಾಪಿ ಹಿನ್ನೆಲೆ ಇಲ್ಲದವರಿಗೆ ಭೂಮಿ ಖರೀದಿಸಲು ಅವಕಾಶ ಇರಲಿಲ್ಲ. ಆದರೆ ಇದೀಗ ಈ ನಿರ್ಬಂಧವನ್ನು ತೆಗೆದುಹಾಕಲಾಗಿದ್ದು ಯಾರು ಬೇಕಾದರೂ ಭೂಮಿ ಕೊಳ್ಳುವ ಅವಕಾಶ ನೀಡಲಾಗಿದೆ. ಜೊತೆಗೆ ಹೆಚ್ಚಿನ ಆದಾಯ ಹೊಂದಿರುವವರು ಕೃಷಿ ಭೂಮಿ ಖರೀದಿಸಿದ ಸಂದರ್ಭದಲ್ಲಿ ಅದನ್ನು ಸರ್ಕಾರದ ಸುಪರ್ಧಿಗೆ ಪಡೆಯಲು 79ಎ, 79ಬಿ ಪ್ರಕರಣ ದಾಖಲಿಸಲು, ಕಾಯ್ದೆ ಉಲ್ಲಂಘನೆ ಮಾಡಿದ್ದು ಕಂಡುಬಂದರೆ ಮಟ್ಟಗೋಲು ಹಾಕಿಕೊಳ್ಳುವ ಅವಕಾಶ ಇತ್ತು. ಈಗಾಗಲೇ ಇಂತಹ ಪ್ರಕರಣಗಳು ಇತ್ಯರ್ಥವಾಗಲು ಬಾಕಿ ಇದ್ದಲ್ಲಿ ಈ ಸುಗ್ರೀವಾಜ್ಞೆ ಮುಕ್ತಾಯ ಹಾಡಲಿದೆ ಎಂದೂ ಸರ್ಕಾರ ಮಾಹಿತಿ ನೀಡಿದೆ.
ಉಳುವವನೇ ಹೊಲದೊಡೆಯ ಎಂಬ ಆಶಯದಡಿ 1947 ರ ಭೂ ಸುಧಾರಣಾ ಕಾಯ್ದೆಯಲ್ಲಿ ಸರ್ಕಾರ ಇದೀಗ ಬದಲಾವಣೆ ತಂದಿದ್ದು, ಆ ಮೂಲಕ ಎಲ್ಲರಿಗೂ ಭೂಮಿ ಖರೀದಿಗೆ ಸಮಾನ ಅವಕಾಶ ಒದಗಿಸಲಾಗಿದೆ. ಆರಂಭದಲ್ಲಿ ಈ ತಿದ್ದುಪಡಿಗೆ ಭಾರೀ ಪ್ರಮಾಣದಲ್ಲಿ ಪರ ವಿರೋಧಗಳೂ ವ್ಯಕ್ತವಾಗಿದ್ದು, ಸದ್ಯ ರಾಜ್ಯಪಾಲರು ಈ ಸುಗ್ರೀವಾಜ್ಞೆಗೆ ಅಂಕಿತ ಹಾಕುವ ಮೂಲಕ ಈ ತಿದ್ದುಪಡಿ ಅಧಿಕೃತವಾಗಿ ಜಾರಿಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.